ಬ್ಯಾಂಕ್‌ ಖಾತೆಯಿಂದ ಹಣ ಲಪಟಾಯಿಸಿದ ಅಪರಿಚಿತ ವ್ಯಕ್ತಿ-ವಂಚನೆಗೊಳಗಾದ ಮಹಿಳೆಯಿಂದ ದೂರು ದಾಖಲು

0

ಪುತ್ತೂರು: ವಂಚನೆ ಮಾಡುವ ಮೂಲಕ 13 ಸಾವಿರ ರೂಪಾಯಿ ಬ್ಯಾಂಕ್‌ ಖಾತೆಯಿಂದ ಕಡಿತಗೊಳಿಸಲಾಗಿದೆ ಎಂದು ಪುತ್ತೂರಿನ ಚಿಕ್ಕಮಡ್ನೂರು ನಿವಾಸಿ ಐಡಾ ಶಾಂತಿ ಲೋಬೊ (43) ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆ.2ರಂದು ರಾತ್ರಿ ಐಡಾ ಶಾಂತಿ ಲೋಬೊ ಅವರ ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿ ವಂಚನೆ ಮೂಲಕ ಹಣ ಪಡೆದಿದ್ದಾರೆ. 13 ಸಾವಿರ ರೂಪಾಯಿ ಕಡಿತಗೊಂಡಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿದೆ. ಖಾತೆಯಿಂದ ಕಡಿತಗೊಂಡಿರುವ ಬಗ್ಗೆ ಐಡಾ ಶಾಂತಿ ಲೋಬೊ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅ ಕ್ರ ನಂ: 21/2024 ಕಲಂ:420 ಐ ಪಿ ಸಿ ಮತ್ತು 66(ಸಿ), 66(ಡಿ ) ಐ ಟಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here