ಕೆಯ್ಯೂರು: ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ ಪ್ರವೀಣ್ ಕಟ್ಟತ್ತಾರು, ಉಪಾಧ್ಯಕ್ಷ ದೀಪಕ್ ರೈ ಮಾಡಾವು, ಪ್ರದಾನ ಕಾರ್ಯದರ್ಶಿ ರಾಕೇಶ್ ಬಲ್ಲಾಳ್ 

0

ಕೆಯ್ಯೂರು. ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು 2024-25ನೇ ಸಾಲಿನ ನೂತನ 21ನೇ ವರ್ಷದ ಪದಾಧಿಕಾರಿಗಳ ಆಯ್ಕೆಯು ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಗೌರವಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ ಅಧ್ಯಕ್ಷತೆಯಲ್ಲಿ ನಡೆಯಿತು. 21ನೇ ವರ್ಷದ ನೂತನ ಅಧ್ಯಕ್ಷರಾಗಿ ಪ್ರವೀಣ್ ಕಟ್ಟತ್ತಾರು, ಉಪಾಧ್ಯಕ್ಷರಾಗಿ ದೀಪಕ್ ರೈ ಮಾಡಾವು, ಪ್ರಧಾನ ಕಾರ್ಯದರ್ಶಿ ರಾಕೇಶ್ ಬಲ್ಲಾಳ್ ಸಣoಗಳ, ಜೊತೆ ಕಾರ್ಯದರ್ಶಿ ಮೋಹನ್ ಕುಮಾರ್ ದೇವಾಡಿಗ ಮಾಡಾವು, ಖಜಾಂಚಿ ಶಶಿಧರ. ಜೆ ಸಂತೋಷ್ ನಗರ, ಕ್ರೀಡಾ ಕಾರ್ಯದರ್ಶಿ ಅನೀಷ್ ಸಂತೋಷ್ ನಗರ, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಕೆಯ್ಯೂರು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರಾದ ಸದಾಶಿವ ಭಟ್.ಎ., ಕೃಷ್ಣಪ್ರಸಾದ್ ರೈ ಕಣಿಯಾರು, ಸ್ಥಾಪಕಾಧ್ಯಕ್ಷ ರಾಧಕೃಷ್ಣ ರೈ ಸಣಂಗಳ, ಮಾಜಿ ಅಧ್ಯಕ್ಷರುಗಳಾದ ದಿನೇಶ್ ಕೆ.ಎಸ್,  ಶರತ್ ಕುಮಾರ್ ರೈ ದೇರ್ಲ, ಸದಸ್ಯರುಗಳು ಉಪಸ್ಥಿತರಿದ್ದರು. ಕೆಪಿಎಸ್.ಕೆಯ್ಯೂರು ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ.ಎಸ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here