ಮಾ.16: ಪೂಜಾರಿಮೂಲೆ ದೈವಾನುಗ್ರಹ ಪಡುಮಲೆ ಮನೆಯಲ್ಲಿ ದೈವಗಳ ನೇಮೋತ್ಸವ

0

ಪುತ್ತೂರು: ಪಡುಮಲೆಯ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಹಿಂಬದಿಯಲ್ಲಿರುವ ‘ಪೂಜಾರಿಮೂಲೆ’ ಎಂಬುದು ಬಹುಕಾಲದ ಹಿಂದಿನಿಂದಲೇ ನಾಟಿ ವೈದ್ಯಕೀಯ ಚಿಕಿತ್ಸೆಗೆ ಪ್ರಸಿದ್ಧವಾಗಿತ್ತು. ಆ ಪಾರಂಪರಿಕವಾಗಿ ದಿ.ದೂಮ ಪೂಜಾರಿಯವರ ಪುತ್ರ ವಿಶ್ವನಾಥ ಪೂಜಾರಿಯವರು ಪ್ರಕೃತಿ ನಾಟಿ ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದು ಸದ್ರಿ ಪ್ರದೇಶವನ್ನು ಸಸ್ಯ ಸಂಜೀವಿನಿ ಕ್ಷೇತ್ರವಾಗಿಸಿದ್ದಾರೆ. ಇಲ್ಲಿ ಪಾಷಾಣಮೂರ್ತಿ, ಕೊರಗಜ್ಜಿ, ಗುಳಿಗ ದೈವಗಳ ಆರಾಧನೆಯೂ ಜರಗುತ್ತಿದೆ. ಪಡುಮಲೆ ಕೂವೆ ಶಾಸ್ತಾರ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ಪ್ರಶ್ನಾಚಿಂತನೆಗಳ ಪ್ರಕಾರ ಸದ್ರಿ ಪರಿಸರದಲ್ಲಿ ವೈಧ್ಯನಾಥೇಶ್ವರ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತೆಂದು ತಿಳಿದು ಬಂದಿದ್ದು ಬಲ್ಲಾಳರ ಕಾಲದಲ್ಲಿ ಉಚ್ಚಾಯ ಸ್ಥಿತಿಯಲ್ಲಿದ್ದ ಆ ಕ್ಷೇತ್ರವು ಕಾರಣಾಂತರಗಳಿಂದ ನಶಿಸಿ ಹೋಗಿರುವುದಾಗಿಯೂ, ಅದನ್ನು ಜೀರ್ಣೋದ್ಧಾರಗೊಳಿಸಿ ಮನರುತ್ಥಾನ ಪ್ರಕ್ರಿಯೆ ಕೈಗೊಳ್ಳಬೇಕಾಗಿಯೂ ತಿಳಿದುಬಂದಿರುತ್ತದೆ. ಈ ಕ್ಷೇತ್ರದ ಪುನರ್‌ನಿರ್ಮಾಣಕ್ಕೆ ಭಕ್ತಾಧಿಗಳ ಸಹಕಾರದ ಅಗತ್ಯವಿದೆ.
ಮಾ.16ರಂದು ದೈವಾನುಗ್ರಹ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ ಹಾಗೂ ಸಂಜೆ ಗುಳಿಗ, ಕಲ್ಲುರ್ಟಿ, ಕೊರಗಜ್ಜ ದೈವಗಳ ನೇಮೋತ್ಸವ ನಡೆಯಲಿದೆ. ಸಂಜೆ 4 ಕ್ಕೆ ಗುಳಿಗ ದೈವದ ನೇಮ ಬಳಿಕ ದೈವಗಳ ಭಂಡಾರ ತೆಗೆಯುವುದು, ಸಂಜೆ ಕಲ್ಲುರ್ಟಿ ದೈವದ ನೇಮ ಬಳಿಕ ಅನ್ನಸಂತರ್ಪಣೆ ನಡೆದು ರಾತ್ರಿ 11ಕ್ಕೆ ಕೊರಗಜ್ಜ ದೈವದ ನೇಮ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧಪ್ರಸಾದ, ಅನ್ನಪ್ರಸಾದ ಸ್ವೀಕರಿಸುವಂತೆ ಸಸ್ಯ ಸಂಜೀವಿನಿ ನಾಟಿ ವೈದ್ಯರಾದ ವಿಶ್ವನಾಥ ಪೂಜಾರಿ ಮತ್ತು ಮಕ್ಕಳು ಹಾಗೂ ಊರ ಹತ್ತು ಸಮಸ್ತರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here