ಮೈಂದಡ್ಕ ನಮ್ಮೂರು ನಮ್ಮವರು ಸಂಸ್ಥೆಯಿಂದ “ನಮ್ಮೂರ ಟ್ರೋಫಿ” ಕ್ರಿಕೆಟ್ ಪಂದ್ಯಾಟ

0

ಪುತ್ತೂರು: 34 ನೆಕ್ಕಿಲಾಡಿಯ ನಮ್ಮೂರು ನಮ್ಮವರು ಮೈಂದಡ್ಕ ಸಂಸ್ಥೆಯಿಂದ ಮೈಂದಡ್ಕ ಮೈದಾನದಲ್ಲಿ ನಿಗದಿತ ಓವರುಗಳ ‘ಅಂಡರ್ ಆರ್ಮ್ “ನಮ್ಮೂರ ಟ್ರೋಫಿ” ಕ್ರಿಕೆಟ್ ಪಂದ್ಯಾಟವು ನಡೆಯಿತು. 22 ತಂಡಗಳು ಭಾಗವಹಿಸಿದ್ದ ಈ ಪಂದ್ಯಾಟದಲ್ಲಿ ನಮ್ಮೂರು ನಮ್ಮವರು ಮೈಂದಡ್ಕ ತಂಡವು ಪ್ರಥಮ ಹಾಗೂ ಎಸ್ ಎಮ್ ಡಿ ಅರ್ಕ ದ್ವಿತೀಯ ಸ್ಥಾನ ವನ್ನು ಪಡೆಯಿತು.


ಸಮಾರೋಪ ಸಮಾರಂಭದಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ನಮ್ಮೂರ ಟ್ರೋಫಿ ನೀಡಲಾಯಿತು. ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ನಾಲ್ಕು ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಆರ್ ರೈ, ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಶಿವಾಜಿನಗರ , ಜಾನ್ ಕೆನ್ಯೂಟ್ , ಪ್ರಭಾಕರ ನಾಯಕ್, ಆನಂದ ಗೌಡ ಕೊಳಕ್ಕೆ, ಭಾವನಾ ಕಲಾ ಆರ್ಟ್ ನ ಗಣೇಶ್ ಆಚಾರ್ಯ, ಹರೀಶ್ ನಾಯ್ಕ, ಗಣೇಶ್ ನಾಯಕ್, ಪಂದ್ಯಾಟದ ಪ್ರಾಯೋಜಕರು, ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here