ಮೋದಿ ಕೈ ಬಲಪಡಿಸಲು ಬ್ರಿಜೇಶ್ ಚೌಟರನ್ನು ಬಹುಮತದಿಂದ ವಿಜಯಿಗೊಳಿಸೋಣ

0

ಕೆದಿಲ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶದಲ್ಲಿ ಅಭಿವೃದ್ಧಿ ಹಾಗೂ ಶಾಂತಿ ಸಹಬಾಳ್ವೆ ಮೂಡಿದ್ದು,ಭಾರತ ಇಡೀ ಜಗತ್ತಿಗೆ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ.ಭವ್ಯ ಭಾರತದ ಪರಿಕಲ್ಪನೆ ಹಾಗೂ ಭರವಸೆಯ ನಾಳೆಗಳಿಗಾಗಿ ದೇಶಕ್ಕೆ ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರ ಆಡಳಿತವೇ ಪರಿಹಾರ ಎಂದು ಪುಣಚ ಮಹಾಶಕ್ತಿ ಕೇಂದ್ರದ ಬಿಜೆಪಿ ಚುನಾವಣಾ ಪ್ರಭಾರಿಗಳಾದ ಸಹಜ್ ರೈ ಬಳಜ್ಜ ತಿಳಿಸಿದರು.

ಅವರು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪುಣಚ ಮಹಾಶಕ್ತಿ ಕೇಂದ್ರದ ಕೆದಿಲ ಶಕ್ತಿ ಕೇಂದ್ರದ ಬೂತ್ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಚುನಾವಣಾ ಕಾರ್ಯವನ್ನು ಬೂತಮಟ್ಟದಲ್ಲಿ ಅನುಷ್ಠಾನಗೊಳಿಸಲು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್,ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು,ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್,ಶ್ರೀ ಕೃಷ್ಣ ಉಪಾಧ್ಯಾಯ, ಶಕ್ತಿ ಕೇಂದ್ರದ ಅಧ್ಯಕ್ಷ ಪದ್ಮನಾಭ ಭಟ್, ಹರೀಶ್ ವಿಟ್ಲ, ವಿವಿಧ ಬೂತ್ ಗಳ ಅಧ್ಯಕ್ಷರಾದ ಉಮ್ಮರಬ್ಬ, ಪದ್ಮನಾಭ ಗೌಡ,ಉಮೇಶ್ ಮುರುವ,ಬೂತ್ ಕಾರ್ಯದರ್ಶಿಗಳಾದ ಜಗದೀಶ್ ಕೆರೆಕೋಡಿ,ಬಾಲಕೃಷ್ಣ ಗೌಡ,ಸಹಕಾರಿ ಸಂಘದ ಉಪಾಧ್ಯಕ್ಷ ಧರ್ಣಪ್ಪ ಗೌಡ,ನಿರ್ದೇಶಕರಾದ ಧನಂಜಯ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಜಯಂತಿ ಧನಂಜಯ ಶೆಟ್ಟಿ, ಸದಸ್ಯ ಶ್ಯಾಮ್ ಪ್ರಸಾದ್, ಶಿವಕುಮಾರ್, ಸುದರ್ಶನ್ ಕುದುಂಬ್ಲಾಡಿ ಹಾಗೂ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here