ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಬಡಗನ್ನೂರು: ಕುದ್ಕಾಡಿ ಮನೆತನದ ಶ್ರೀ ರಕ್ತೇಶ್ವರೀ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ.24ರಂದು ಬ್ರಹ್ಮಶ್ರೀ  ವೇಧ ಮೂರ್ತಿ ಕುಂಟಾರು ವಾಸುದೇವತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪಡುಮಲೆ ಇದರ ಪ್ರಧಾನ ಅರ್ಚಕ ಮಹಾಲಿಂಗ ಭಟ್ ರವರ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು.

ಮಾ.24ರಂದು ಬೆಳಗ್ಗೆ ನಾಗದೇವರ ತಂಬಿಲ, ಹರಿಸೇವೆ, ಸಂಜೆ ಗಂ 6.30 ಕ್ಕೆ ದೈವಸ್ಥಾನದಿಂದ ಭಂಡಾರ ತೆಗೆಯುವುದು, ತೊಡಂಗಲ್,ನಂತರ ಮೇಲೇರಿ ಆಗ್ನಿ ಸ್ಪರ್ಶ,  ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ 11ರಿಂದ ಪೋಟ್ಟಭೂತದ ನೇಮ ನಡೆಯಿತು.
ಮಾ.25ರಂದು ಪ್ರಾತಃ ಕಾಲ ಗಂ 4ರಿಂದ ಶ್ರೀ ರಕ್ತೇಶ್ವರೀ ದೈವದ ನೇಮ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಮಾ.24ರಂದು ಕುಮಾರಿ ಅಂಕಿತ ಶೆಟ್ಟಿ ಕುದ್ಕಾಡಿ ವಿಶ್ವಕಲಾನಿಕೇತನ ನೃತ್ಯ ಶಾಲೆ ಪದಡ್ಕ ಪರ್ಮಲೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ರಾತ್ರಿ ಗಂ 9ರಿಂದ ಉಡುಪಿ ಕಲಾರ್ಘ್ಯ ಯಕ್ಷಗಾನ ತಂಡದ ಸದಸ್ಯರಿಂದ “ಮೇದಿನಿ ನಿರ್ಮಾಣ- ಮಹಿಷವಧೆ”ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ  ಕುದ್ಕಾಡಿ ಮನೆತನದ ಯಜಮಾನ ಬಾಲಕೃಷ್ಣ ರೈ ಕುದ್ಕಾಡಿ, ಹಾಗೂ ಕುಟುಂಬಸ್ಥರು ಮತ್ತು ಗಣ್ಯರು ಭಾಗವಹಿಸಿದ್ದರು.

ಗೌರವಾರ್ಪಣೆ 
ಹಿರಿಯ ಯಕ್ಷಗಾನ ಕಲಾವಿದರುಗಳಾದ ದೇವಿಪ್ರಾದ್ ಕೆ.ಸಿ ಪಡುಮಲೆ ಅನುಪಸ್ಥಿತಿಯಲ್ಲಿ ಅವರ ಮಗನಾದ ಕೌಶಿಕ್ ಅವರನ್ನು ಹಾಗೂ ಗಣೇಶ ಭಟ್ ಈಶಮೂಲೆ ಅವರನ್ನು ಡಿ ಕುದ್ಕಾಡಿ ಮನೆತನದ ಯಜಮಾನ ಬಾಲಕೃಷ್ಣ ರೈ ಕುದ್ಕಾಡಿ ಶಾಲು ಹಾಕಿ ಸ್ಮರಣೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here