ಉಪ್ಪಿನಂಗಡಿ: ಭಜನಾ ಮಂಡಳಿಯ ಅಧ್ಯಕ್ಷರಾಗಿ ಹರೀಶ್ ಪೈ

0

ಉಪ್ಪಿನಂಗಡಿ: ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಪಿ.ಹರೀಶ ಪೈ ಸತತ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಕೆ. ಸತೀಶ ಕಿಣಿ, ಪ್ರಧಾನ ಕಾರ್ಯದರ್ಶಿಯಾಗಿ ಕರಾಯ ಗಿರೀಶ್ ನಾಯಕ್ ಆಯ್ಕೆಯಾದರು. ದೇವಾಲಯದ ಸಭಾಂಗಣದಲ್ಲಿ ಈ ಆಯ್ಕೆ ನಡೆದಿದ್ದು, ಈ ಸಂದರ್ಭ ಪದಾಧಿಕಾರಿಗಳಾದ ಎಚ್. ರಾಘವೇಂದ್ರ ಪ್ರಭು, ವಿನಾಯಕ ಪ್ರಭು, ಕೇದಾರನಾಥ ಶೆಣೈ, ಪಣಕಜೆ ಪ್ರಸಾದ್ ಶೆಣೈ, ದಿನೇಶ್ ಶೆಣೈ, ಕೆ. ಶ್ರೀನಿವಾಸ ಭಟ್ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರರಾದ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಯು.ನಾಗರಾಜ ಭಟ್, ಕೆ.ಅನಂತರಾಯ ಕಿಣಿ, ಕೆ.ದೇವಿದಾಸ ಭಟ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here