ಕಡಬ:ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥೆಯರ ಮನೆಗೆ ವಿ.ಹಿಂ.ಪ. ದ.ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಭೇಟಿ

0

ಕಡಬ: ಕಡಬ ಸ.ಪ.ಪೂ. ಕಾಲೇಜಿನಲ್ಲಿ ಇತ್ತಿಚ್ಚೆಗೆ ಆ್ಯಸಿಡ್ ದಾಳಿಗೊಳಗಾಗಿ ಗಾಯಗೊಂಡಿದ್ದ ಸಂತ್ರಸ್ಥೆಯರ ಮನೆಗಳಿಗೆ ವಿ.ಹಿಂ.ಪ. ದ.ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಮಾ.27ರಂದು ಭೇಟಿ ನೀಡಿ ಸಾಂತ್ವನ ಹೇಳಿದರು.


ಇತ್ತಿಚೆಗೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಕೊಠಡಿಯೊಳಗೆ ತೆರಳುವ ವೇಳೆ ಕೇರಳದ ಯುವಕನೋರ್ವ ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ, ಆ್ಯಸಿಡ್ ದಾಳಿಯಿಂದ ಗಾಯಗೊಂಡಿದ್ದ ಕಡಬ ಪರಿಸರದ ಮೂರು ವಿದ್ಯಾರ್ಥಿನಿಯರ ಮನೆಗೆ ಭೇಟಿ ನೀಡಿ ಮನೆಮಂದಿಯ ಜತೆ ಹಾಗೂ ಸಂತ್ರಸ್ಥೆಯರ ಜತೆ ಮಾತನಾಡಿ ಅವರಿಗೆ ದೈರ್ಯ ತುಂಬಿದರು. ಈ ಸಂದರ್ಭದಲ್ಲಿ ವಿ.ಹಿಂ.ಪ. ಕಡಬ ಪ್ರಖಂಡ ಕಾರ್ಯದರ್ಶಿ ಜಯಂತ ಕಲ್ಲುಗುಡ್ಡೆ, ಮಾತೃಶಕ್ತಿ ಪ್ರಮುಖ್ ಪ್ರೇಮಲತಾ ವಾಸುದೇವ ಕೇಪುಂಜ, ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೇಶ್ ಪ್ರಮುಖರಾದ ಪ್ರಮೋದ್ ರೈ ನಂದುಗುರಿ, ಉಮೇಶ್ ಆಚಾರ್ಯ,ತಿಲಕ್ ರೈ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here