ಆನೆ ದಾಳಿಗೆ ಸಿಲುಕಿ ಕೃಷಿ ನಾಶ

0

ಉಪ್ಪಿನಂಗಡಿ: ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ವಿವಿಧ ಕಡೆಗಳಲ್ಲಿ ಕಾಡಾನೆಗಳು ಬುಧವಾರವೂ ಗೋಚರಿಸಿದ್ದು, ಭತ್ತದ ಕೃಷಿ ಹಾಗೂ ತೋಟದಲ್ಲಿ ಬೆಳೆದು ನಿಂತ ಬೆಳೆಗಳನ್ನು ಹಾನಿಗೊಳಿಸಿದ ಬಗ್ಗೆ ವರದಿಯಾಗಿದೆ.
ಬಂದಾರು ಗ್ರ್ರಾಮದ ನೆಲ್ಲಿಗೇರಿ ಮೋನಪ್ಪ ಗೌಡರ ಗದ್ದೆಗೆ ನುಗ್ಗಿದ ಆನೆಯಿಂದಾಗಿ ಭತ್ತದ ಕೃಷಿ ನಾಶವಾಗಿದೆ. ಬೆಳೆದು ನಿಂತ ಭತ್ತದ ಪೈರು ಆನೆ ತುಳಿತಕ್ಕೆ ಸಿಲುಕಿ ಹಾನಿಗೀಡಾಗಿದೆ. ಚಂದ್ರಶೇಖರ್ ಎಂಬವರ ತೋಟಕ್ಕೆ ನುಗ್ಗಿದ ಆನೆಯು ಅಲ್ಲಿನ ಬಾಳೆ ಗಿಡಗಳನ್ನು ಛಿದ್ರಗೊಳಿಸಿದೆ. ಹಾಗೂ ಬಂದಾರು ಗ್ರಾಮದ ಬೀಬಿ ಮಜಲು ಎಂಬಲ್ಲಿನ ರಾಮಣ್ಣ ಗೌಡರ ತೋಟಕ್ಕೆ ದಾಳಿ ಮಾಡಿ ಅಲ್ಲಿಯೂ ಕೃಷಿ ಬೆಳೆಗಳನ್ನು ಧ್ವಂಸಗೊಳಿಸಿದೆ .
ಘಟನಾ ಸ್ಥಳಕ್ಕೆ ಉಪ ವಲಯ ಅರಣ್ಯಾಧಿಕಾರಿ ಜೆರಾಲ್ಡ್ ಡಿಸೋಜಾ, ಅರಣ್ಯ ಗಸ್ತು ಪಾಲಕ ಜಗದೀಶ್, ಅರಣ್ಯ ವೀಕ್ಷಕ ಸೇಸಪ್ಪ, ವಾಹನ ಚಾಲಕ ಕಿಶೋರ್ ಭೇಟಿ ನೀಡಿದ್ದು, ಆನೆ ದಾಳಿಯಿಂದ ನಾಗರಿಕರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here