ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆಮುಹೂರ್ತ

0

ಪುತ್ತೂರು: ಶಾಂತಿಗೋಡು ಶ್ರೀವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಎ.2 ಹಾಗೂ 3ರಂದು ನಡೆಯಲಿದ್ದು ಇದರ ಗೊನೆಮುಹೂರ್ತ ಕಾರ್ಯಕ್ರಮ ಮಾ.28ರಂದು ನಡೆಯಿತು.

ದೇವಸ್ಥಾನದ ಅರ್ಚಕ ಶ್ರೀರಾಮಕೃಷ್ಣ ಬಳ್ಳಕ್ಕುರಾಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಗೊನೆಮುಹೂರ್ತ ನಡೆಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಶಾಂತಿಗೋಡು, ಜಾತ್ರಾ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಕೈಂದಾಡಿ, ಕಾರ್ಯದರ್ಶಿ ಕೃಷ್ಣಪ್ಪ ಪೂಜಾರಿ ಕೈಂದಾಡಿ, ಕೋಶಾಧಿಕಾರಿ ಬಾಲಕೃಷ್ಣ ಗೌಡ ತೋಟ, ಸಲಹಾ ಸಮಿತಿಯ ಕುಶಾಲಪ್ಪ ಗೌಡ ಸೊರಗೆತ್ತಡಿ, ನಾರಾಯಣ ಪೂಜಾರಿ ಬೇರಿಕೆ, ಜತ್ತಪ್ಪ ಗೌಡ ಕೈಂದಾಡಿ, ಕುಸುಮಾಧರ ಶಾಂತಿಗೋಡು, ಹರೀಶ್ ಗೌಡ ಕಂರ್ಬಡ್ಕ, ರಾಮಕೃಷ್ಣ ಭಟ್ ಗುಂಡಿಬೈಲು, ದೇವರಾಜ ಗೌಡ ಕಲ್ಕಾರು, ಗೌರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಮಾಯಿಲಪ್ಪ ಪಜಿರೋಡಿ, ಸುಬ್ರಹ್ಮಣ್ಯ ಹೆಬ್ಬಾರ್ ಸೇರಾಜೆ, ವಿಶ್ವನಾಥ ಬಲ್ಯಾಯ ಮುಂಡೋಡಿ, ತುಳಸಿ ಕುಸುಮಾಧರ ಗೌಡ ಶಾಂತಿಗೋಡು, ಶೀನಪ್ಪ ಗೌಡ ಕೋಡಿ, ಕೃಷ್ಣ ಸಾಲ್ಯಾನ್ ವಿಷ್ಣುನಗರ, ಅಜೇಯ ರೈ ಪಾಪುನಾರ್, ಪದ್ಮಿನಿ ಹೆಬ್ಬಾರ್, ಆನಂದ ಬಲ್ಯಾಯ ಮುಂಡೋಡಿ, ಪ್ರಮೀಳಾ ಜನಾರ್ದನ ಆಚಾರ್ಯ ಶಾಂತಿಗೋಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here