ಆರ್ಯಾಪು:ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಜಲಜೀವನ್ ಮಿಷನ್‌ ಸೈಟ್ ಸೂಪರ್ ವೈಸರ್ ಪಾಲಾಕ್ಷ ಮೃತ್ಯು

0

ಪುತ್ತೂರು: ಜಲಜೀವನ್ ಮಿಷನ್ ಅಡಿಯಲ್ಲಿ ಆರ್ಯಾಪು ಗ್ರಾಮದ ಬಂಗಾರಡ್ಕದಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಮೇಲಿಂದ ಬಿದ್ದು ಸೈಟ್ ಸೂಪರ್‌ವೈಸರ್ ಪಾಲಾಕ್ಷ ಎಂಬವರು ಮೃತಪಟ್ಟ ಘಟನೆ ಮಾ.27ರಂದು ನಡೆದಿದೆ.


ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಮಂಚಿಕೊಪ್ಪ ಗ್ರಾಮದ ಹುಚ್ಚಪ್ಪ ಎಂಬವರ ಪುತ್ರ ಪುತ್ತೂರು ಜಲಜೀವನ್ ಮಿಷನ್‌ನ ಕೆವಿಆರ್ ಕಂಪೆನಿಯಲ್ಲಿ ಸೈಟ್ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿರುವ ಪಾಲಾಕ್ಷ (31ವ)ರವರು ಮೃತಪಟ್ಟವರು. ಅವರು ಮಾ.27ರಂದು ಸಂಜೆ ಆರ್ಯಾಪು ಗ್ರಾಮದ ಬಂಗಾರಡ್ಕದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ವೀಕ್ಷಣೆಗೆ ಹೋದ ಸಂದರ್ಭ ನೀರಿನ ಟ್ಯಾಂಕ್ ಮೇಲೆ ಹತ್ತಿ ವೀಕ್ಷಣೆ ಮಾಡುವಾಗ ಕಾಲು ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅಲ್ಲೇ ಇದ್ದ ಧನರಾಜ್ ಎಂಬವರು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಗಲೇ ಪಾಲಾಕ್ಷ ಮೃತಪಟ್ಟಿದ್ದರು. ಘಟನೆ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here