ಜಿಲ್ಲಾ ಪ್ರಚಾರ ಸಮಿತಿಯ ಸದಸ್ಯರಾಗಿ ಶೈಲಜಾ ಅಮರನಾಥ್ ನೇಮಕ

0

ಪುತ್ತೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರಾಗಿ ಪುತ್ತೂರಿನ ಶೈಲಜಾ ಅಮರನಾಥ ಅವರನ್ನು ನೇಮಕ ಮಾಡಲಾಗಿದೆ.

ಹಿರಿಯ ಕಾಂಗ್ರೆಸ್ಸಿಗ ಬಪ್ಪಳಿಗೆ ಕಿಟ್ಟಣ್ಣ ಗೌಡರವರ ಪುತ್ರರಾದ ಯುವ ಕಾಂಗ್ರೆಸ್ ಮುಂದಾಳು, ಉದ್ಯಮಿ ಅಮರನಾಥ ಗೌಡರವರ ಪತ್ನಿಯಾಗಿರುವ ಶೈಲಜಾ ಅಮರನಾಥ್ ಅವರನ್ನು ಕೆಪಿಸಿಸಿ ಉಪಾಧ್ಯಕ್ಷರೂ ದ.ಕ. ಚುನಾವಣಾ ಪ್ರಚಾರ ಉಸ್ತುವಾರಿಯೂ ಆಗಿರುವ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಪ್ರಚಾರ ಸಮಿತಿಗೆ ನೇಮಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾನೂನು ಸಲಹೆಗಾರರಾಗಿಯೂ ಸೇರಿದಂತೆ ವಿವಿಧ ಜವಾಬ್ದಾರಿ‌ ನಿರ್ವಹಿಸಿರುವ ಶೈಲಜಾ ಅಮರನಾಥ್ ಅವರು ಪುತ್ತೂರಿನಲ್ಲಿ ನ್ಯಾಯವಾದಿಯಾಗಿದ್ದಾರೆ.

LEAVE A REPLY

Please enter your comment!
Please enter your name here