ನೆಲ್ಲಿಕಟ್ಟೆ ನಿವಾಸಿ ವೇಣುಗೋಪಾಲ್ ಶೆಟ್ಟಿ ವಿದೇಶದಲ್ಲಿ ನಿಧನ

0

ಪುತ್ತೂರು: ಮೂಲತಃ ನೆಲ್ಲಿಕಟ್ಟೆ ನಿವಾಸಿಯಾಗಿದ್ದ ದಿ| ಜನಾರ್ದನ್ ಶೆಟ್ಟಿ ಯವರ ಹಿರಿಯ ಪುತ್ರ, ವೇಣುಗೋಪಾಲ್ ಶೆಟ್ಟಿ (53ವ) ಬಹರೈನ್‌ನಲ್ಲಿ ಮಾ.29ರಂದು ರಂದು ಬೆಳಗ್ಗೆ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಪುತ್ತೂರಿನಲ್ಲಿ 2000ನೇ ಇಸವಿಯಲ್ಲಿ ಸೈಬರ್ ಸಿಟಿ, ಎನ್‌ಐಐಟಿ ಮೊದಲಾದ ಕಂಪ್ಯೂಟರ್ ಸಂಸ್ಥೆಗಳ ಪಾಲುದಾರರಾಗಿದ್ದ ಇವರು ಸದ್ಯ ಹಲವು ವರ್ಷಗಳಿಂದ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದರು. ಮೃತರು ತಾಯಿ, ಪತ್ನಿ, ಸಹೋದರಿ ಮತ್ತು ಸಹೋದರರಾದ ನೆಲ್ಲಿಕಟ್ಟೆ ನಿವಾಸಿ ದೀಪಕ್ ಶೆಟ್ಟಿ, ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ವಿನೋದ್ ಶೆಟ್ಟಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here