ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನದಲ್ಲಿ ವಾರ್ಷಿಕೋತ್ಸವ , ಕಾಲದಿ ತಂಬಿಲ

0

ಪುತ್ತೂರು:ಕುರಿಯ ಏಳ್ನಾಡುಗುತ್ತು ತರವಾಡು ದೈವಸ್ಥಾನದಲ್ಲಿ  ಮಾ.30  ಹಾಗೂ 31 ರಂದು ವಾರ್ಷಿಕೋತ್ಸವ ಹಾಗೂ ಕಾಲದಿ ತಂಬಿಲ ಕಾರ್ಯಕ್ರಮ ವು ಗಣಹೋಮ ಶ್ರೀ ಲಕ್ಷ್ಮಿ ಸತ್ಯ ನಾರಾಯಣ ಪೂಜೆ  ಶ್ರೀ ಶಕ್ತಿಮಹಮ್ಮಾಯಿ ಪೂಜೆ ಹರಿಸೇವೆ ನಾಗತಂಬಿಲ ದೊಂದಿಗೆ ಜರುಗಿತು . ಅರ್ಚಕರಾದ ಪ್ರಕಾಶ್ ನಕ್ಷತ್ರಿತ್ತಾಯ ಕೊಡ್ಲಾರ್ ಮತ್ತು  ಸುಬ್ರಮಣ್ಯ ನಕ್ಷತ್ರಿತ್ತಾಯ ಕುರಿಯ ರವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು .ಮಾ.31ರಂದು  ಕಾಲದಿ ತಂಬಿಲ ಸೇವೆ ಹಾಗೂ ರಾತ್ರಿ ಕಲ್ಲುರ್ಟಿ ಮತ್ತು ಕೊರತಿ ಹಾಗೂ ಗುರು ಕಾರ್ನವರಿಗೆ ಅಗೇಲು ಸೇವೆ ನಡೆಯಿತು.

 ಈ ಸಂದರ್ಭದಲ್ಲಿ ಕುಟುಂಬದ ಯಜಮಾನರು ಸಹಿತ ಕುಟುಂಬದ ಸಮಸ್ತ ಸದಸ್ಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here