ಮಹಾಬಲ-ಲಲಿತ ಕಲಾ ಸಭಾದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

0

ಪುತ್ತೂರು: ಮಹಾಬಲ-ಲಲಿತ ಕಲಾ ಸಭಾದ ಆಶ್ರಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮಾ.31 ರಂದು ಸಂಜೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರಗಿತು.


ಕಾರ್ಯಕ್ರಮದಲ್ಲಿ ದ್ವಂದ್ವಗಾಯನವನ್ನು ವಿದ್ವಾನ್ ಆದಿತ್ಯನಾರಾಯಣ್ ಚೆನ್ನೈ ಹಾಗೂ ವಿದ್ವಾನ್ ಆದಿತ್ಯಮಾಧವನ್ ಚೆನ್ನೈರವರು ನಡೆಸಿಕೊಟ್ಟರು. ವಯೊಲಿನ್ ನಲ್ಲಿ ವಿದ್ವಾನ್ ಬಿ.ಕೆ ರಘು ಬೆಂಗಳೂರು, ಮೃದಂಗದಲ್ಲಿ ವಿದ್ವಾನ್ ಎಚ್.ಎಸ್ ಸುಧೀಂದ್ರ ಬೆಂಗಳೂರು, ಘಟದಲ್ಲಿ ವಿದ್ವಾನ್ ಶೀನು ಗೋಪಿನಾಥ್ ಕೊಟ್ಟಾಯಂರವರು ಸಹಕರಿಸಿದರು. ನೂರಾರು ಸಂಖ್ಯೆಯಲ್ಲಿ ಸಂಗೀತಾಭಿಮಾನಿಗಳು ಆಗಮಿಸಿ ಸಂಗೀತದ ಕಳೆಯನ್ನು ಹೆಚ್ಚಿಸಿದ್ದರು. ಮಹಾಬಲ-ಲಲಿತ ಕಲಾ ಸಭಾದ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ.ರವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು..

LEAVE A REPLY

Please enter your comment!
Please enter your name here