ಟ್ರೆಂಡ್ ಕೇಂದ್ರೀಯ ಸಮಿತಿ ಸದಸ್ಯರಾಗಿ ಯೂಸುಫ್ ಮುಂಡೋಳೆ ಆಯ್ಕೆ

0

ಪುತ್ತೂರು: ಟೀಂ ರಿಸೋರ್ಸ್ ಫಾರ್ ಎಜ್ಯುಕೇಷನ್ ಆಂಡ್ ನ್ಯಾಷನಲ್ ಡೆವಲಪ್ಮೆಂಟ್ (ಟ್ರೆಂಡ್) ಇದರ ಕೇಂದ್ರ ಸಮಿತಿಯ ಸದಸ್ಯರಾಗಿ ಕರ್ನಾಟಕದಿಂದ ಯೂಸುಫ್ ‌ಎಂ. ಮುಂಡೋಳೆ ಆಯ್ಕೆಯಾಗಿದ್ದಾರೆ.

ಸಮಸ್ತ ಕೇಂದ್ರೀಯ ಸುನ್ನಿ ಸ್ಟೂಡೆನ್ಸ್ ಫೆಡರೇಷನ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಶೈಕ್ಷಣಿಕ ವಿಭಾಗದ ಟ್ರೆಂಡ್ ಕಳೆದ ಎರಡು ದಶಕಗಳಿಂದ ಮುಸ್ಲಿಂ ‌ಸಮುದಾಯದಲ್ಲಿ ಶೈಕ್ಷಣಿಕ ಹಾಗೂ‌ ಸಾಮಾಜಿಕವಾಗಿ ಜಾಗೃತಿ ಮೂಡಿಸಿಕೊಂಡು ಬರುತ್ತಿದೆ. ಇದರ 2024-26ನೇ ಸಾಲಿನ ಕೇಂದ್ರೀಯ ಸಮಿತಿ‌ ಸದಸ್ಯರಾಗಿ ಹವ್ಯಾಸಿ ಪತ್ರಕರ್ತರಾಗಿರುವ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ನಿವಾಸಿ ಯೂಸುಫ್ ‌ಎಂ.‌ಆಯ್ಕೆಯಾಗಿದ್ದಾರೆ. ಸದ್ಯ ಇವರು ಸಮಸ್ತ ಶಿಕ್ಷಣ ಮಂಡಳಿ ಅಧೀನದಲ್ಲಿರುವ ಅಲ್ ಬಿರ್ ಸ್ಕೂಲ್ಸ್ ಇದರ ಕಿಡ್ಸ್ ಮ್ಯಾಗಜೀನ್ ನ ಸಂಪಾದಕರಾಗಿ ಹಾಗೂ ಸತ್ಯಧಾರ ಕನ್ನಡ ಪತ್ರಿಕೆಯ ಕನ್ವಿನರ್ ಆಗಿದ್ದಾರೆ.

LEAVE A REPLY

Please enter your comment!
Please enter your name here