ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಸಂಘದ ವತಿಯಿಂದ ತಿಂಗಳ ಸರಣಿ ತಾಳಮದ್ದಳೆಯು ದೇವಳದ ರಾಜ ಗೋಪುರದಲ್ಲಿ ನಡೆಯಿತು.


ಪಾರ್ತಿಸುಬ್ಬ ವಿರಚಿತ “ಉರಗಾಸ್ತ್ರ ಪ್ರಯೋಗ “ಎಂಬ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ನಿತೀಶ್ ಕುಮಾರ್ ಹಾಗೂ ಚೆಂಡೆ ಮದ್ದಳೆಗಳಲ್ಲಿ ಪದ್ಯಾಣ ಶಂಕರ ನಾರಾಯಣ ಭಟ್ , ಮುರಳೀಧರ ಕಲ್ಲೂರಾಯ,ಮಾ. ಪರೀಕ್ಷಿತ್ ಸಹಕರಿಸಿದರು. ಹಿಮ್ಮೇಳದಲ್ಲಿ ಕಿಶೋರಿ ದುಗ್ಗಪ್ಪ ನಡುಗಲ್ಲು (ಶ್ರೀರಾಮ), ಮನೋರಮಾ ಜಿ. ಭಟ್ (ಲಕ್ಷ್ಮಣ), ಶ್ರೀಧರ ರಾವ್ ಕುಂಬ್ಳೆ (ಸೀತೆ), ಭಾಸ್ಕರ ಬಾರ್ಯ (ವಿಭೀಷಣ), ಗುಡ್ಡಪ್ಪ ಬಲ್ಯ (ರಾವಣ ), ದುಗ್ಗಪ್ಪ ನಡುಗಲ್ಲು (ಇಂದ್ರಜಿತು), ಹರಿಣಾಕ್ಷಿ ಜೆ.ಶೆಟ್ಟಿ(ವಿದ್ಯುಜಿಹ್ವ), ಭಾರತಿ ರೈ ಅರಿಯಡ್ಕ (ಸರಮೆ) ಸಹಕರಿಸಿದರು. ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ರಂಗನಾಥ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here