ನಗರಸಭೆ ಆರೋಗ್ಯ ನಿರೀಕ್ಷಕಿ ವರಲಕ್ಷ್ಮೀರವರಿಗೆ ಪತಿವಿಯೋಗ

0


ಪುತ್ತೂರು: ಪುತ್ತೂರು ನಗರಸಭೆ ಆರೋಗ್ಯ ನಿರೀಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಡ್ಯ ಮೂಲದ ವರಲಕ್ಷ್ಮೀ ಅವರ ಪತಿ ರಘು ಡಿ. ಕೆ (45ವ) ಅವರು ಹೃದಯಾಘಾತದಿಂದ ನಿಧನರಾದರು.


ಅವರ ಗಂಡ ಮಂಡ್ಯದಲ್ಲಿ ಪೊಟೋಗ್ರಫಿ ಮಾಡುತ್ತಿದ್ದು ಇತ್ತೀಚೆಗೆ ಪತ್ನಿ ವರಲಕ್ಷ್ಮೀ ಅವರು ವಾಸ್ತವ್ಯ ಹೊಂದಿರುವ ಪುತ್ತೂರು ಬನ್ನೂರು ಮನೆಗೆ ಬಂದಿದ್ದವರಿಗೆ ಎ.5 ರಂದು ಸಂಜೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ ವರಲಕ್ಷ್ಮೀ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ನಗರಸಭಾ ಸದಸ್ಯರಾದ ಪಿ ಜಿ ಜಗನ್ನಿವಾಸ ರಾವ್, ಬಾಲಚಂದ್ರ, ನಗರಸಭೆ ಸಿಬ್ಬಂದಿಗಳು ಆಸ್ಪತ್ರೆಗೆ ತೆರಳಿದ್ದಾರೆ. ರಘು ಡಿ ಕೆ ಅವರ ಮೃತ ದೇಹವನ್ನು ನಗರಸಭೆ ಸಿಬ್ಬಂದಿಗಳೊಂದಿಗೆ ಮಂಡ್ಯಕ್ಕೆ ಕಳುಹಿಸಿಕೊಡಲಾಗಿದೆ.

LEAVE A REPLY

Please enter your comment!
Please enter your name here