ಉಡುಪಿ ಜಿಲ್ಲೆಯಲ್ಲೂ ಸೇವೆಗೆ ಸಿದ್ಧವಾದ ವಿದ್ಯಾಮಾತಾ ಅಕಾಡೆಮಿ…

0

ನಾಳೆಯೇ (ಏ.9 ) ಕಾರ್ಕಳದಲ್ಲಿ ಶುಭಾರಂಭಗೊಳ್ಳಲಿದೆ ಅಕಾಡೆಮಿಯ 2 ನೆಯ ಶಾಖೆ
ಭಾರತೀಯ ಆಡಳಿತ ಸೇವೆಯಿಂದ ಶುರುವಾಗಿ ಕೆಳ ದರ್ಜೆ ಹುದ್ದೆವರೆಗಿನ ತರಬೇತಿಗೆ ಪ್ರಸಿದ್ದಿ ಪಡೆದಿರುವ ಏಕೈಕ ಸಂಸ್ಥೆ…

ಪುತ್ತೂರು : ಕರಾವಳಿ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರೇ ಇಲ್ಲವೆನ್ನುವ ಕೂಗಿನ ನಡುವೆಯೇ , ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಉತ್ತಮ ತರಬೇತಿ ನೀಡಿ , ನೂರಾರು ವಿದ್ಯಾರ್ಥಿಗಳು ಸರಕಾರಿ ಹುದ್ದೆಗೆ ಅಲಂಕಾರಿಸುವಲ್ಲಿ ಯಶಸ್ವಿಯಾಗಿರುವ ವಿದ್ಯಾಮಾತಾ ಅಕಾಡೆಮಿಯೂ ಏ.9 ರಂದು,ಕಾರ್ಕಳದಲ್ಲಿ ಎರಡನೆಯ ಶಾಖೆಯನ್ನು ಪ್ರಾರಂಭಿಸಲಿದೆ.


ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವ ಮುಖಾಂತರ ಆಸಕ್ತ ವಿದ್ಯಾರ್ಥಿಗಳ ಸರಕಾರಿ ಹುದ್ದೆಯ ಕನಸನ್ನು ನನಸು ಮಾಡಿ , ಅವರ ಜೀವನಕ್ಕೆ ಗಟ್ಟಿ ಅಡಿಪಾಯದ ನಿರ್ಮಾಸಿ ಕೊಡುವುದೇ ಅಕಾಡೆಮಿಯ ಪ್ರಮುಖ ಧ್ಯೇಯ ಮತ್ತು ಉದ್ದೇಶ.ಮಾತೃ ಸಂಸ್ಥೆ ವಿದ್ಯಾಮಾತಾ ಫೌಂಡೇಶನ್ (ರಿ) ಮೂಲಕ 2017 ರಿಂದ ಈವರೆಗೂ 3 ರಾಜ್ಯಮಟ್ಟದ ಉದ್ಯೋಗ ಮೇಳಗಳು , 600ರ ಕ್ಕೂ ಮಿಕ್ಕಿದ ಉದ್ಯೋಗ ನೇರ ಸಂದರ್ಶನಗಳ ಮೂಲಕ ಸುಮಾರು 5 ಸಾವಿರಕ್ಕೂ ಮಿಕ್ಕಿದ ಉದ್ಯೋಗ ಆಕಾಂಕ್ಷಿಗಳು ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವಲ್ಲಿ ಅಕಾಡೆಮಿಯ ಅವಿರತ ಶ್ರಮ ಬಹಳಷ್ಟಿದೆ.

2020 ರಿಂದ ಪುತ್ತೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಪ್ರಾರಂಭಿಸಿ ಒಂದೇ ಸೂರಿನ ಮೂಲಕ ಬ್ಯಾಂಕಿಂಗ್ , ಎಫ್. ಡಿ .ಎ, ಎಸ್. ಡಿ. ಎ ,ಶಿಕ್ಷಕರ ನೇಮಕಾತಿ ,ಭಾರತೀಯ ಸೇನೆ , ಪೊಲೀಸ್, ಅರಣ್ಯ ಇಲಾಖೆ ಇತ್ಯಾದಿ ನೇಮಕಾತಿಗಳಿಗೆ ತರಬೇತಿ ನೀಡಿ , ಆ ಮುಖೇನ 120 ರಷ್ಟು ವಿದ್ಯಾರ್ಥಿಗಳು ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಮಾಡಿರುವ ಕೀರ್ತಿ ವಿದ್ಯಾಮಾತಾದ್ದು. ಕಾರ್ಪೊರೇಟ್ ಸಂಸ್ಥೆಗಳಲ್ಲಿ ಉದ್ಯೋಗ ಮಾಡಬೇಕೆಂಬ ಹಂಬಲ ಹೊಂದಿರುವವರಿಗೆ ಅಕೌಂಟಿಂಗ್ , ಎಚ್. ಆರ್ , ಅಡ್ಮಿನ್ ತರಬೇತಿ ನೀಡೋ ಮುಖಾಂತರ ಕಾರ್ಪೊರೇಟ್ ಸಂಸ್ಥೆಯಲ್ಲೂ ಕೂಡ ಉತ್ತಮ ಹುದ್ದೆ ನಿರೀಕ್ಷೆಯಲ್ಲಿರುವ ಉದ್ಯೋಗಕಾಂಕ್ಷಿಗಳ ಕನಸು ಅಕಾಡೆಮಿ ಮೂಲಕ ಸಾಕಾರಗೊಂಡಿದೆ.


15 ಮೀರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಸೂರಿನಲ್ಲಿ ತರಬೇತಿ ಜೊತೆಗೆ ತರಬೇತಿ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯತೆ ,ಉಚಿತ ಸ್ಪೋಕನ್ ಇಂಗ್ಲೀಷ್ , ಉಚಿತ ಕಂಪ್ಯೂಟರ್, ಉಚಿತ ದೈಹಿಕ ಸದೃಢತೆಯ ತರಬೇತಿ ನೀಡುವುದರ ಜೊತೆಗೆ ಎರಡು ವರ್ಷಗಳ ಕಾಲ ಉಚಿತವಾಗಿ ಸರಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಯನ್ನು , ಮಾಹಿತಿಯನ್ನು ಕೂಡ ಸಂಸ್ಥೆ ಒದಗಿಸಿಕೊಡುತ್ತಿದೆ.ಬಿಪಿಎಲ್ ,ಅಂತ್ಯೋದಯ ಕಾರ್ಡುದಾರರಿಗೆ ವಿದ್ಯಾರ್ಥಿಗಳಿಗೆ 6000 ರೂ ವಿದ್ಯಾರ್ಥಿವೇತನವನ್ನು ತನ್ನ ಮಾತೃ ಸಂಸ್ಥೆಯಾದ ವಿದ್ಯಾಮಾತಾ ಫೌಂಡೇಶನ್ ನ ಮೂಲಕ ನೀಡಲಾಗುತ್ತಿದ್ದು , ಆ ಮೊತ್ತವನ್ನು ತರಬೇತಿ ಶುಲ್ಕದಲ್ಲಿ ಕಡಿತ ಮಾಡಲಾಗುತ್ತದೆ.

ಪ್ರತಿ ವರ್ಷವೂ 50 ವಿದ್ಯಾರ್ಥಿಗಳಿಗೆ ಈ ಸೌಲಭ್ಯವನ್ನು ಕಳೆದ ಮೂರು ವರ್ಷಗಳಿಂದ ನೀಡಲಾಗುತ್ತಿದೆ .ಹೈಸ್ಕೂಲ್ , ಪದವಿಪೂರ್ವ , ಪದವಿ , ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಉದ್ಯೋಗ ಸಂದರ್ಶನಗಳನ್ನು ಎದುರಿಸುವ ಬಗೆಗಿನ ಮಾಹಿತಿ ಕಾರ್ಯಗಳನ್ನು ನಡೆಸುವ ಮುಖಾಂತರ ಜಾಗೃತಿ ಕಾರ್ಯವೂ ನಡೆಯುತ್ತದೆ. ತರಬೇತಿಯು ನೇರ ತರಗತಿಗಳ ಮೂಲಕ ಹಾಗೂ ಉದ್ಯೋಗಸ್ಥರಿಗೆ ,ವಿದ್ಯಾರ್ಥಿಗಳಿಗೆ ,ಗೃಹಿಣಿಯರಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ 9 ರವರೆಗೆ ದಿನನಿತ್ಯ ಆನ್ಲೈನ್ ಮೂಲಕ ಲಭ್ಯವಿರುತ್ತದೆ . ವಿದ್ಯಾಮಾತಾ ಅಕಾಡೆಮಿ ಆಡಳಿತ ನಿರ್ದೇಶಕರಾಗಿ ಭಾಗ್ಯೇಶ್ ರೈ ರವರು ಸಂಸ್ಥೆ ಯಶಸ್ವಿಗೆ ಶ್ರಮಿಸುತ್ತಿದ್ದು ವಿದ್ಯಾಮಾತಾ ಅಕಾಡೆಮಿಯ ಆಡಳಿತ ಕಚೇರಿ ಪುತ್ತೂರಿನಲ್ಲಿದೆ .ಸುಳ್ಯದಲ್ಲೂ ಕೂಡ ಶಾಖೆ ಇದ್ದು , ಇದೀಗ ನೂತನ ಶಾಖೆ ಕಾರ್ಕಳದಲ್ಲಿಯೂ ಶುಭಾರಂಭವಾಗಲಿದೆ.


ಕಾರ್ಕಳ ಶಾಖಾ ಸಂಚಾಲಕಿಯಾಗಿ ಶ್ರೀಮತಿ ರಮಿತಾ ಶೈಲೇಂದ್ರ ಇವರನ್ನು ಆಡಳಿತ ಮಂಡಳಿ ಆಯ್ಕೆ ಮಾಡಿದ್ದು, ಕಾರ್ಕಳ ಶಾಖೆಯನ್ನು ಇವರು ಮುನ್ನಡೆಸಲಿದ್ದಾರೆ .ಕಾರ್ಕಳದಲ್ಲೂ ಕೂಡ ನಿವೃತ್ತ ಶಿಕ್ಷಕರು ,ಅಧಿಕಾರಿ ವರ್ಗ , ಗಣ್ಯರನ್ನು ಒಳಗೊಂಡ ಗೌರವ ಸಲಹಾ ಸಮಿತಿ ಶೀಘ್ರ ರಚನೆಯಾಗಲಿದೆಯೆಂದು ಆಡಳಿತ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here