ಬೆಳ್ಳಾರೆ : ಕಾಡುಹಂದಿ ಡಿಕ್ಕಿಯಾಗಿ ಸ್ಕೂಟರ್ ನಲ್ಲಿದ್ದ ಯುವಕ ಮೃತ್ಯು

0

ಪುತ್ತೂರು: ಚಲಿಸುತ್ತಿದ್ದ ಸ್ಕೂಟರ್ ವೊಂದಕ್ಕೆ ಕಾಡು ಹಂದಿ ಡಿಕ್ಕಿಯಾಗಿ ಸ್ಕೂಟರ್ ನಲ್ಲಿದ್ದ ಯುವಕ ಮೃತ್ತಪಟ್ಟ ಘಟನೆ ಎ.11 ರಂದು ಸವಣೂರು ಮತ್ತು ಬೆಳ್ಳಾರೆ ರಸ್ತೆಯ ಬೋರಡ್ಕದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಬೆಳ್ಳಾರೆ ಗ್ರಾಮದ ಉಣಿಕ್ಕಳ ನಿವಾಸಿ ಮಹಮ್ಮದ್ ರಾಧಿಕ್ (16 ವ) ಮೃತಪಟ್ಟವರು. ಅವರು ತನ್ನ ಮನೆಯಿಂದ ಬೆಳ್ಳಾರೆಯ ಕುಂಡಡ್ಕದಲ್ಲಿರುವ ಅಜ್ಜಿ ಮನೆಗೆ ಸಂಬಂಧಿ ಜೊತೆ ಸ್ಕೂಟರ್ ನಲ್ಲಿ ಬರುತ್ತಿದ್ದ ವೇಳೆ ಬೋರಡ್ಕದಲ್ಲಿ ಕಾಡು ಹಂದಿಯೊಂದು ರಸ್ತೆಗೆ ಬಂದು ಸ್ಕೂಟರ್ ಗೆ ಡಿಕ್ಕಿಯಾಗಿತ್ತು.‌ ಅಪಘಾತದಿಂದ ತೀವ್ರ ಗಾಯಗೊಂಡ ಮಹಮ್ಮದ್ ರಾಧಿಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here