ಇಡ್ಯಾಡಿಯಲ್ಲಿ ‘ಶ್ರೀ ಶುಭ ನಿಲಯ’ದ ಗೃಹ ಪ್ರವೇಶ – ಇಡ್ಯಾಡಿ ಕುಶಾಲಪ್ಪ ಗೌಡ – ಶುಭರವರ ದಾಂಪತ್ಯ ಜೀವನದ 25ನೇ ವರ್ಷಾಚರಣೆ

0

ಪುತ್ತೂರು: ಸವಣೂರು ಗ್ರಾಮದ ಇಡ್ಯಾಡಿಯಲ್ಲಿ ಕುಶಾಲಪ್ಪ ಗೌಡ, ಶುಭ ಕುಶಾಲಪ್ಪ ಗೌಡ, ಚರಣ್ ಇ.ಕೆ ಮತ್ತು ಚಂದನ್ ಇ.ಕೆ ರವರ ‘ಶ್ರೀ ಶುಭ ನಿಲಯ’ದ ಗೃಹ ಪ್ರವೇಶ ಕಾರ‍್ಯಕ್ರಮವು ಏ.12 ರಂದು ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ನೆರವೇರಿತು.

ಬೆಳಿಗ್ಗೆ ಗಾನ ಸುರಭಿ ಬಳಗ ಉಜಿರೆಯವರಿಂದ ಭಜನ್ ಪ್ರಭಾ ಕಾರ‍್ಯಕ್ರಮ ಜರಗಿತು. ಇದೇ ಸಂದರ್ಭದಲ್ಲಿ ಇಡ್ಯಾಡಿ ಕುಶಾಲಪ್ಪ ಗೌಡ-ಶುಭರವರ ದಾಂಪತ್ಯ ಜೀವನದ 25ನೇ ವರ್ಷಾಚರಣೆ ಕಾರ‍್ಯಕ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಲಾಯಿತು.

ಕುಶಾಲಪ್ಪ ಗೌಡ ಇಡ್ಯಾಡಿ , ಶುಭ ಕುಶಾಲಪ್ಪ ಗೌಡ, ಚರಣ್ ಇ.ಕೆ ಮತ್ತು ಚಂದನ್ ಇ.ಕೆ ಹಾಗೂ ಕುಶಾಲಪ್ಪ ಗೌಡರವರ ಸಹೋದರ ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮತ್ತು ಕುಟುಂಬಸ್ಥರು ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here