ಪುತ್ತೂರು ನಾಟ್ಯರಂಗ ಎಡನೀರು ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾವತರಣಂ ಪ್ರಸ್ತುತಿ

0

ಪುತ್ತೂರು: ಕಲಾವಿದರಿಂದ ಕಲಾಪ್ರೇಕ್ಷಕರಡೆಗೆ ಕಲಾಪ್ರಜ್ಞೆ ಹರಿದು ಬರಬೇಕು. ಕಲೆ ವ್ಯಕ್ತಿಯನ್ನು ಅರಳಿಸುವ ಕಾರ್ಯದೊಂದಿಗೆ ಸೂಕ್ಷ್ಮಪ್ರಜ್ಞೆಯನ್ನು ಬೆಳೆಸುತ್ತದೆ. ಮಠದ ಸಾನಿಧ್ಯವು ಕಲಾವಿದರಿಗೂ, ಕಲಾಪೇಕ್ಷಕರಿಗೂ, ಕಲಾ ಪೋಷಕರಿಗೂ, ಭಗವದ್ಭಕ್ತರಿಗೂ ಸದಾ ಆಶ್ರಯ ತಾಣವಾಗಬೇಕು ಎಂಬುದೇ ನಮ್ಮ ಸದಾಶಯ ಎಂದು ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ದೀಪ ಬೆಳಗಿಸಿ ಮಾತನಾಡಿದರು.

ಅವರು ಭಾರತೀ ಕಲಾ ಸದನ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿದುಷಿ ಮಂಜುಳ ಸುಬ್ರಹ್ಮಣ್ಯ ಇವರ ಗುರುತ್ವದಲ್ಲಿ ಪುತ್ತೂರಿನ ನಾಟ್ಯರಂಗದ ಎಡನೀರು ಶಾಖೆಯ ವಿದ್ಯಾರ್ಥಿನಿಯರಾದ ಮಧುಶ್ರೀ ,ದೇವನಂದ , ಶ್ರೀನಂದ ಹಾಗೂ ನೃತ್ಯ ಗುರುಗಳ ಸಮನ್ವಯದಲ್ಲಿ ಎಡ ನೀರು ಮಠದ ಭಾರತೀ ಕಲಾಸದನದಲ್ಲಿ ನೃತ್ಯಾವತರಣಂ ಪ್ರಸ್ತುತಿ ಸಂಪನ್ನಗೊಂಡಿತು .

ಕೇರಳ ರಾಜ್ಯ ಬಯೋಡೈವರ್ಸಿಟಿ ಬೋರ್ಡ್ ಮೆಂಬರ್ ಸೆಕ್ರೆಟರಿ, ಡಿವೈಎಸ್ಪಿ ಡಾ. ಬಿ ಬಾಲಕೃಷ್ಣನ್ ಮಾತನಾಡಿ “ಮಠದ ಆಶ್ರಯವು ತಮ್ಮ ಬದುಕಿನಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು ಪ್ರಸಕ್ತ ಸನ್ನಿವೇಶಗಳಲ್ಲಿ ಕಲಾವಿದರನ್ನು ಸೃಷ್ಟಿಸುವಷ್ಟೇ ಆದ್ಯತೆ ಹಾಗೂ ಪ್ರಾಮುಖ್ಯತೆ ಕಲಾ ಆಸ್ವಾಧಕರನ್ನು ಸೃಷ್ಟಿಸುವಲ್ಲಿ ನೀಡುತ್ತಿರುವುದು ಶ್ಲಾಘನೀಯ ಎಂದರು.ವಿದುಷಿ ಅನುಪಮಾ ರಾಘವೇಂದ್ರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಸ್ವಾಮೀಜಿ ಕಲಾವಿದರಿಗೆ ಅಭಿನಂದನ ಪತ್ರ ನೀಡಿ ಹರಸಿದರು.

ಕಾರ್ಯಕ್ರಮದಲ್ಲಿ ಗಣೇಶ ಸ್ತುತಿ ,ಪುಷ್ಪಾಂಜಲಿ, ಕವಿ ಜಯದೇವ ವಿರಚಿತ ಗೀತ ಗೋವಿಂದ, ಜತಿಸ್ವರ ,ಶಿವಸ್ತುತಿ, ದೇವರ ನಾಮ ,ಸೂರದಾಸ ಭಜನ್ ಪ್ರಸ್ತುತಗೊಂಡವು.

ಕಲಾ ಶಾಲೆಯ ವಿದ್ಯಾರ್ಥಿನಿ ಸುಶ್ಮಿತಾ ಪ್ರಾರ್ಥಿಸಿ, ನಾಟ್ಯ ರಂಗದ ಪೋಷಕೆ ಆಶಾ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿ, ಮೇಘಶ್ರೀ ವಂದಿಸಿದರು,

LEAVE A REPLY

Please enter your comment!
Please enter your name here