ಬಳ್ಪ: ಯುವಕನ ಮೇಲೆಗೆರಗಿದ ಕಡವೆ-ಯುವಕ ಆಸ್ಪತ್ರೆಗೆ ದಾಖಲು

0

ಕಡಬ: ದನಗಳನ್ನು ಮೇಯಿಸಲು ಗುಡ್ಡದತ್ತ ಹೋಗುತ್ತಿದ್ದ ವೇಳೆ ಕಡವೆಯೊಂದು ಯುವಕನ ಮೇಲೆ ದಿಢೀರ್ ಮೈ ಮೇಲೆ ಹಾರಿದ್ದು ಯುವಕ ಗಂಭೀರ ಗಾಯಗೊಂಡು ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಕಡಬ ಸಮೀಪದ ಬಳ್ಪ ಗ್ರಾಮದಿಂದ ವರದಿಯಾಗಿದೆ.


ಕಡಬ ತಾಲೂಕು ಬಳ್ಪ ಗ್ರಾಮದ ಆಲ್ಕಬೆ ರಾಮಣ್ಣ ಗೌಡರ ಪುತ್ರ ಸಂಜಯ್ ಎಂಬವರು ತಮ್ಮ ಮನೆಯ ದನಗಳನ್ನು ಮೇವಿಗಾಗಿ ಕರೆದೊಯ್ಯುವಾಗ ದಿಢೀರನೆ ಕಡವೆಯೊಂದು ಇವರ ಮೇಲೆ ಹಾರಿದೆ. ಇದರಿಂದ ಸಂಜಯ ರವರ ಕೈ ಮತ್ತು ಸೊಂಟಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದ್ದು, ಇತ್ತೀಚೆಗೆ ಇಲ್ಲಿನ ಮನೆಯೊಂದರಿಂದ 5 ನಾಯಿಗಳನ್ನು ಚಿರತೆ ಕೊಂಡೊಯ್ದಿರುವುದಾಗಿ ತಿಳಿದು ಬಂದಿದೆ. ಚುನಾವಣಾ ಸಂದರ್ಭದಲ್ಲಿ ಕೃಷಿಕರ ಕೋವಿಗಳನ್ನು ಡೆಪಾಸಿಟ್ ಇಟ್ಟು ಕೃಷಿಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಸ್ಥಳೀಯರು ಕೋವಿ ಡೆಪಾಸಿಟ್ ನಿಯಮದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here