ಇರ್ದೆ-ಬೆಟ್ಟಂಪಾಡಿ ಗ್ರಾಮೀಣ ವಲಯ ಕಾಂಗ್ರೆಸ್ ನಿಂದ ಮನೆ ಮನೆ ಪ್ರಚಾರ

0

ಪುತ್ತೂರು:ಮಂಗಳೂರು ಲೋಕಸಭಾ ಚುನಾವಣೆಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯ ಪರವಾಗಿ ಎ.15ರಂದು ಇರ್ದೆ-ಬೆಟ್ಟಪಾಡಿ ಗ್ರಾಮೀಣ ವಲಯದ 5 ಬೂತ್ ಗಳಲ್ಲಿ ಏಕ ಕಾಲದಲ್ಲಿ ಮನೆ ಮನೆ ಭೇಟಿ ನೀಡಿ ಪ್ರಚಾರ ನಡೆಸಿದರು.


ಇಸ್ಮಾಯಿಲ್ ಕೆ. ರೆಂಜರವರ ಮನೆಯಲ್ಲಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳ ಮಾಹಿತಿ ನೀಡಿದರು.


ಇರ್ದೆ-ಬೆಟ್ಟಂಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ನವೀನ್ ರೈ ಚೆಲ್ಯಡ್ಕ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಉಪಾಧ್ಯಕ್ಷ ಅಬೂಬಕ್ಕರ್ ಕೊರೆಂಗಿಲ, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಮೊಯಿದು ಕುoಞ ಕೋನಡ್ಕ, ಇರ್ದೆ ಬೆಟ್ಟoಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಸದಾಶಿವ ರೈ ಚೆಲ್ಯಡ್ಕ, ಬೂತ್ ಅಧ್ಯಕ್ಷ ಯಾಕೂಬ್, ಮನೋಜ್ ಇರ್ದೆ, ಕುoಞ ಗುಂಡ್ಯಡ್ಕ, ಕಾರ್ತಿಕ್ ಉಪ್ಪಳಿಗೆ, ಸಾತ್ವಿಕ್ ಉಪ್ಪಳಿಗೆ, ಅರುಣ್ ಕುಮಾರ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here