ನೀರಕಟ್ಟೆ: ಹೃದಯಾಘಾತದಿಂದ ಸಂಕಪ್ಪ ನಿಧನ

0

ನೆಲ್ಯಾಡಿ: ಪತ್ನಿ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪತಿ ಮೃತಪಟ್ಟಿರುವ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಎ.18ರಂದು ನಡೆದಿದೆ.


ಬಂಟ್ವಾಳ ತಾಲೂಕು ಕೈರಂಗಳ ಗ್ರಾಮದ ಪಾಂಡಿಕಟ್ಟಿ ನಿವಾಸಿ ಸಂಕಪ್ಪ(40ವ.)ಮೃತಪಟ್ಟವರಾಗಿದ್ದಾರೆ. ಸಂಕಪ್ಪ ಅವರ ಪತ್ನಿ ಸುನೀತಾ ಹಾಗೂ ಮಗ ನೀರಕಟ್ಟೆಯಲ್ಲಿ ವಾಸವಾಗಿದ್ದು ಸಂಕಪ್ಪ ಅವರು ಪಾಂಡಿಕಟ್ಟಿಯಲ್ಲಿ ತಾಯಿಯೊಂದಿಗೆ ವಾಸವಿದ್ದರು. ಸಂಕಪ್ಪ ಅವರು ಆಗಾಗ ಪತ್ನಿ ಮನೆಗೆ ಬಂದು ಯೋಗಕ್ಷೇಮ ವಿಚಾರಿಸಿಕೊಂಡು ಹೋಗುತ್ತಿದ್ದು ಅನ್ಯೋನ್ಯತೆಯಿಂದ ಇದ್ದರು. ಎ.8ರಂದು ನೀರಕಟ್ಟೆಗೆ ಬಂದವರು ಅಲ್ಲಿಯೇ ಕೆಲಸ ಮಾಡಿ ಉಳಿದುಕೊಂಡಿದ್ದರು. ಎ.18ರಂದು ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಬುಟ್ಟಿ ಹೆಣೆಯುವ ಕೆಲಸ ಮಾಡಿಕೊಂಡಿದ್ದವರು ಊಟ ಮಾಡುತ್ತಿರುವಾಗ ಹಠಾತನೆ ಸೈಡಿಗೆ ಬಿದ್ದವರನ್ನು ಪತ್ನಿ ಉಪಚರಿಸಿ ಅಕ್ಕಪಕ್ಕದ ಮನೆಯವರ ಸಹಕಾರ ಪಡೆದು ಅಂಬ್ಯುಲೆನ್ಸ್‌ನಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿಯ ವೈದ್ಯರು ಪರೀಕ್ಷಿಸಿ ಸಂಕಪ್ಪ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸಂಕಪ್ಪ ಅವರು ಹೃದಯಾಘಾತದಿಂದ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿ ಅವರ ಪತ್ನಿ ಸುನೀತಾ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here