ಇಂದು(ಎ.21) ಶ್ರೀ ಮೂಕಾಂಬಿಕಾ ನೃತ್ಯಾಂತರಂಗದಲ್ಲಿ ಯೋಗೇಶ್ ಕುಮಾರ್, ಸ್ನೇಹಾ ನಾರಾಯಣ್ ಭರತನಾಟ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯಿಂದ ಎ.21ರಂದು ಸಂಜೆ ಗಂಟೆ 6 ರಿಂದ ದರ್ಬೆ ಶಶಿಶಂಕರ ಸಭಾಭವನದಲ್ಲಿ ನೃತ್ಯಾಂತರಂಗ ಸರಣಿ 107ನೇ ಕಾರ್ಯಕ್ರಮವಾಗಿ ಯೋಗೇಶ್ ಕುಮಾರ್ ಮತ್ತು ಸ್ನೇಹಾ ನಾರಾಯಣ್ ಬೆಂಗಳೂರು ಅವರಿಂದ ಭರತನಾಟ್ಯ ಪ್ರಸ್ತುತಿಗೊಳ್ಳಲಿದೆ.


ಕರ್ನಾಟಕ ಸಂಗೀತ ಕಲಾವಿದೆ ಮತ್ತು ಉಪನ್ಯಾಸಕಿ ಸುಮನಾ ಪ್ರಶಾಂತ್ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here