ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾದ ವಿನೋದ್ ಅಕಾಯಿ-ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಟುಂಬ

0

ಪುತ್ತೂರು : ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚ್ಚಾರ್ ಸಮೀಪದ ಅಕಾಯಿಯ ವಿನೋದ್ ಎಂಬವರು ಮೆದುಳಿನ ರಕ್ತಸ್ರಾವ ತೊಂದರೆಯಿಂದಾಗಿ ಅನಾರೋಗ್ಯಕ್ಕೆ ಒಳಗಾಗಿ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇವರ ಚಿಕಿತ್ಸೆಗಾಗಿ ಸುಮಾರು 12 ಲಕ್ಷ ಖರ್ಚಾಗಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿರುತ್ತಾರೆ.

ಇವರ ಕುಟುಂಬವು ಆರ್ಥಿಕ ಬಡ ಕುಟುಂಬವಾಗಿದ್ದು, ತಾಯಿ, ಚಿಕ್ಕಮ್ಮ, ಪತ್ನಿ ಹಾಗೂ ಒಂದು ವರುಷದ ಮಗುವಿನೊಂದಿಗೆ ಇರುವ ಕುಟುಂಬಕ್ಕೆ ಇವರೇ ಆಧಾರಸ್ತಂಭವಾಗಿದ್ದಾರೆ. ಇವರ ಈ ಅನಾರೋಗ್ಯದಿ೦ದ ಕುಟುಂಬಕ್ಕೆ ದಿಕ್ಕುತೋಚದಂತಾಗಿದ್ದಾರೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಚಿಕಿತ್ಸೆಗಾಗಿ ಮನೆಯವರು ದಾನಿಗಳ, ಸಂಘ ಸಂಸ್ಥೆಗಳ ಹಾಗೂ ಎಲ್ಲರ ಸಹಾಯದ ಹಸ್ತ ಬೇಡುತ್ತಿದ್ದಾರೆ. ನೆರವು ನೀಡುವವರು ವಿನೋದ್ ರವರ ಬ್ಯಾಂಕ್‌ ಖಾತೆಗೆ ನೀಡುವಂತೆ ವಿನಂತಿಸಿದ್ದಾರೆ.

ಹೆಸರು – ವಿನೋದ್ ಕುಮಾರ್
ಖಾತೆ ಸಂಖ್ಯೆ -70720100006383
ಶಾಖೆ – ಕುಂಬ್ರ
IFSC – BARBOVJKUMB
MICR ಕೋಡ್ – 575012043

LEAVE A REPLY

Please enter your comment!
Please enter your name here