ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಶವ ಸುಡುವ ಪೆಟ್ಟಿಗೆ ಲೋಕಾರ್ಪಣೆ

0

ಪುತ್ತೂರು:ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಹೊಸದಾಗಿ ಪ್ರಾರಂಭಿಸಲಾಗಿರುವ ಸುಲಭವಾಗಿ ಶವ ಸುಡುವ ಪೆಟ್ಟಿಗೆಯನ್ನು ಏ.21ರಂದು ಲೋಕಾರ್ಪಣೆ ಮಾಡಲಾಯಿತು.


ಸಂಘದ ಅಧ್ಯಕ್ಷ ನವೀನ್ ಡಿ., ಉಪಾಧ್ಯಕ್ಷೆ ಪವಿತ್ರ ಕೆ.ಪಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕರ್ ಎಚ್., ನಿರ್ದೇಶಕರಾದ ಪ್ರವೀಣ್ ಶೆಟ್ಟಿ, ಶಿವಪ್ರಸಾದ್ ನಾಯ್ಕ, ಪರಮೇಶ್ವರ ಭಂಡಾರಿ, ದೇವಪ್ಪ ಪಿ., ಚಂದ್ರ, ದೇವಪ್ಪ ಗೌಡ, ನಮಿತ ಸೇರಾಜೆ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ವಸಂತ ಎಸ್., ಮಾಜಿ ಅಧ್ಯಕ್ಷ ರತ್ನಾಕರ ಬಿ.ಎಸ್., ಮಾಜಿ ನಿರ್ದೇಶಕ ಕೆ.ಎಸ್ ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.


ಗ್ರಾಮೀಣ ಪ್ರದೇಶ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಶವ ಸುಡಲು ಅನುಕೂಲವಿದ್ದು, ಇದನ್ನು ಉಚಿತವಾಗಿ ನೀಡಲಾಗುವುದು. ಇದಕ್ಕಾಗಿ ಪ್ರತ್ಯೇಕ ಸಿಬದಿಯನ್ನು ನೀಡಲಾಗುವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here