ಸರಕಾರಿ ಶಾಲಾ ಆವರಣದಲ್ಲಿದ್ದ ಮರ ಕಳವು

0

ಉಪ್ಪಿನಂಗಡಿ: ಸರಕಾರಿ ಶಾಲೆಯ ಆವರಣದಲ್ಲಿದ್ದ ಬೆಲೆಬಾಳುವ ಮರಗಳನ್ನು ಯಾರೋ ಕಳ್ಳರು ಕಳವು ಗೈದು ಪರಾರಿಯಾದ ಘಟನೆ ಕರಾಯದಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಕರಾಯ ಸರಕಾರಿ ಉನ್ನತೀಕರಿಸಿದ ಶಾಲೆಯಲ್ಲೆ ಈ ಕಳವು ನಡೆದಿದ್ದು, ಈ ಶಾಲೆಯು ಬೆಳ್ತಂಗಡಿ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದ್ದು ಕೂಗಳೆತ ದೂರದಲ್ಲಿದ್ದು ಸುಮಾರು ಹತ್ತಕ್ಕೂ ಮಿಕ್ಕ ಮರಗಳನ್ನು ಶಾಲೆ ರಜೆ ದಿನಗಳಂದು ಕಳವು ಮಾಡಲಾಗಿದೆ. ಈ ಕುರಿತು ಮಾಹಿತಿ ಪಡೆದ ಪುತ್ತೂರು ಉಪವಿಭಾಗಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯವರಿಗೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here