ಆಲಂಕಾರಿನಲ್ಲಿ ನಮ್ಮ ನಡೆ ಮತಕಟ್ಟೆ ಕಡೆ ಕಾರ್ಯಕ್ರಮ

0

ಆಲಂಕಾರು: ನಮ್ಮ ನಡೆ ಮತ ಕಟ್ಟೆಯ ಕಡೆ ಕಾರ್ಯಕ್ರಮದನ್ವಯ ಅಲಂಕಾರು ಗ್ರಾಮ ಪಂಚಾಯತ್ ಮತಗಟ್ಟೆಗೆ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಿ ವಿ ಜಯಣ್ಣ ರವರು ಮತದಾನ ಜಾಗೃತಿಯ ಧ್ವಜರೋಹಣ ನೇರವೆರಿಸಿ ಮತದಾನದ ಮಹತ್ವವನ್ನು ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಿಶ್ವ ನಾಯಕ್ ಪ್ರತಿಜ್ಞಾವಿಧಿ ಭೋದಿಸಿದರು. ನಂತರ ಮತಗಟ್ಟೆಯ ಬೂತ್‌ ಸಂಖ್ಯೆ 57, 58, 59, 60 ಸುತ್ತಮುತ್ತ ಸ್ವಚ್ಚತೆ ಮಾಡುವ ಮೂಲಕ ಶ್ರಮದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್‌ ಅಧ್ಯಕ್ಷೆ ಸುಶೀಲ, ಉಪಾಧ್ಯಕ್ಷ ರವಿ ಪೂಜಾರಿ.ಕೆ, ಪಂಚಾಯತ್ ಕಾರ್ಯದರ್ಶಿ ವಸಂತ್ ಶೆಟ್ಟಿ, ತಾಲೂಕು ಪಂಚಾಯತ್ ವ್ಯವಸ್ಥಾಪಕ ಭುವನೇಂದ್ರ ಕುಮಾರ್, ಸಿಬ್ಬಂದಿ ಪ್ರವೀಣ್, ಗ್ರಾಮ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ಬಿ. ಎಲ್ .ಓ ಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here