ಏ.26: ಕೆಮ್ಮಾಯಿ ಭರತಪುರದಲ್ಲಿ ಶ್ರೀ ಪಂಚಮುಖಿ ಹನುಮಾನ್ ದೇವರ ಮೂರ್ತಿ ಪ್ರತಿಷ್ಠೆ, ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವದ ಪುನಃಪ್ರತಿಷ್ಠಾಪನೆ

0

ಕೆಮ್ಮಾಯಿ: ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ಭರತಪುರದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಆಧ್ಯಾತ್ಮಿಕ ಚಿಂತಕರು, ಹನುಮದೋಪಾಸಕರು ಡಾ| ರಾಮಚಂದ್ರ ಗುರೂಜಿಯವರ ಶುಭಾಶೀರ್ವಾದದೊಂದಿಗೆ, ಏಕ ಜಾತಿ, ಧರ್ಮ ಪೀಠಾಧೀಶ್ವರರಾದ ಸಾಯಿ ಈಶ್ವರ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀ ಪಂಚಮುಖಿ ಹನುಮಾನ್ ದೇವರ ಮೂರ್ತಿ ಪ್ರತಿಷ್ಠೆ ಹಾಗೂ ಶ್ರೀ ಸತ್ಯದೇವತೆ ಕಲ್ಲುರ್ಟಿ ಚಾವಡಿಯಲ್ಲಿ ಶ್ರೀ ಸತ್ಯದೇವತೆ ಕಲ್ಲುರ್ಟಿ ದೈವದ ಪುನಃಪ್ರತಿಷ್ಠಾಪನೆ ದೇವದಾಸ್ ತಂತ್ರಿ ಮುಂಬೈ ಇವರ ನೇತೃತ್ವದಲ್ಲಿ ತಾಂತ್ರಿಕ ವೈದಿಕ ಕಾರ್ಯಕ್ರಮಗಳೊಂದಿಗೆ ಏ.26ರಂದು ನಡೆಯಲಿದೆ.

ಏ.25 ರಂದು ಸಂಜೆ 6.30ಕ್ಕೆ ಸ್ವಸ್ತಿ ಪುಣ್ಯಾಹ, ದೀಪ ಪ್ರಜ್ವಲನೆ, ವಾಸ್ತು ರಾಕ್ಷೋಘ್ನ, ಆದಿವಾಸ, ಏ.26ರಂದು ಬೆಳಿಗ್ಗೆ ಗಣಪತಿ ಹೋಮ, ಕಲಶ ಪೂಜೆ, ಪ್ರತಿಷ್ಠಾ ಹೋಮ, ಮೂರ್ತಿ ಪ್ರತಿಷ್ಠಾಪನೆ, ಕಳಶಾಭಿಷೇಕ, ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ ನಡಯಲಿದೆ ಎಂದು ಭರತಪುರ ಶ್ರೀ ಪಂಚಮುಖಿ ಹನುಮಾನ್ ಉತ್ಸವ ಸಮಿತಿ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಹನುಮದೋಪಾಸಕ ಚೇತನ್ ಕುಮಾರ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here