ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಮಾಡುವಂತೆ ಶಾಸಕರಿಂದ ಸರಕಾರಕ್ಕೆ ಮನವಿ-ಖಾತೆಗಳಿಗೆ ಹರಿದು ಬಂತು ಹಣ

0

ಪುತ್ತೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಇರುವ ಮತ್ತು ಎಪ್ರಿಲ್ ತಿಂಗಳ ಕಂತನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಶಾಸಕ ಅಶೋಕ್ ಕುಮಾರ್ ರೈ ಯವರು ಮನವಿ ಮಾಡಿದ್ದು, ಕಳೆದ ಎರಡು ದಿನಗಳಿಂದ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಹಣಕಾಸು ಇಲಾಖೆಗೆ ನಿರ್ದೇಶನ ನೀಡುವಂತೆ ಸೋಮವಾರದಂದು ಶಾಸಕ ಅಶೋಕ್ ರೈ ಮನವಿ ಮಾಡಿದ್ದರು. ಮಂಗಳವಾರ ಮತ್ತು ಬುಧವಾರ ಕಂತು ಜಮೆಯಾಗಿದೆ. ಕೆಲವರಿಗೆ ಎರಡರಿಂದ ಮೂರು ಕಂತು ಒಂದೇ ಬಾರಿಗೆ ಜಮೆಯಾಗಿದೆ.‌ ಶಾಸಕರ ಮುತುವರ್ಜಿಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here