ʼನನ್ನ ಬೂತ್ ನಾನು ಅಭ್ಯರ್ಥಿʼ ಅಭಿಯಾನ-ಸ್ವಗ್ರಾಮದ ಬೂತ್ ನಲ್ಲಿ ಶಾಸಕರಿಂದ ಭರ್ಜರಿ ಪ್ರಚಾರ

0

ಪುತ್ತೂರು: ʼನನ್ನ ಬೂತ್ ನಾನು ಅಭ್ಯರ್ಥಿʼ ಅಭಿಯಾನದಂತೆ ಶಾಸಕ ಅಶೋಕ್ ಕುಮಾರ್ ರೈ ಅವರು ತನ್ನ ಸ್ವ ಗ್ರಾಮದ ಬೂತ್ ನಂ: 53 ರಲ್ಲಿ ಭರ್ಜರಿ ಚುನಾವಣಾ ಪ್ರಚಾರ ಕಾರ್ಯ ನಡೆಸಿದರು.


ಕಾರ್ಯಕರ್ತರ ಜೊತೆ ತೆರಳಿದ ಶಾಸಕರು ಕೆದಿಕಂಡೆ ಗುತ್ತು, ಪಿಲಿಕುಂಡ ಮತ್ತು ಕೊಂಬಕೋಡಿ ಪರಿಸರದಲ್ಲು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮತಯಾಚನೆ ಮಾಡಿದರು. ಥೇಟ್ ಕಾರ್ಯಕರ್ತರಂತೆ ಮನೆ ಮನೆಗೆ ತೆರಳಿದ ಶಾಸಕರು ರಾಜ್ಯದ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆ ಮತ್ತು ಕೇಂದ್ರದ ಕಾಂಗ್ರೆಸ್ ಪ್ರಣಾಳಿಕೆಯನ್ನು ಮನೆ ಮನೆಗೆ ತಿಳಿಸಿದರು. ಕಾಂಗ್ರೆಸ್ ಬೆಂಬಲಿಸುವಂತೆ ಶಾಸಕರು‌ ಮನವಿ ಮಾಡಿದರು. ಶಾಸಕರ ಜೊತೆ ಸ್ಥಳೀಯ ಕಾಂಗ್ರೆಸ್ ಮುಖಂಡರು, ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರು‌ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here