ಜೀವನದಲ್ಲಿ ದೇಶ ಮತ್ತು ಧರ್ಮಕ್ಕೆ ಜೀವನ ಸಮರ್ಪಣೆ ಮಾಡಬೇಕು-ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಶ್ರೀ

0

ಪುತ್ತೂರು: ಜೀವನದಲ್ಲಿ ದೇಶ ಮತ್ತು ಧರ್ಮಕ್ಕೆ ತಮ್ಮ ಜೀವನ ಸಮರ್ಪಣೆ ಮಾಡಬೇಕು ಎಂದು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ್‌ ಹೇಳಿದ್ದಾರೆ.

ಪುತ್ತೂರಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ವಿದ್ಯಾಲಯದ ಶಂಕರ ಸಭಾಭವನದಲ್ಲಿ ನಡೆದ ಗುರುವಂದನಾ ಮತ್ತು ದಶಾಂಬಿಕೋತ್ಸವ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಗಳು ಆಶೀರ್ವಚನ ನೀಡಿ ಮಾತನಾಡಿ, ಹಿಂದಿನವರು ದೇಶಕ್ಕಾಗಿ ಧರ್ಮಕ್ಕಾಗಿ ಹೋರಾಟ ಮಾಡಿದ್ದಾರೆ. ಇವೆರಡಕ್ಕಾಗಿ ನಾವು ಕೆಲಸ ಮಾಡಿದರೆ ಉಳಿದದ್ದು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಶ್ರೀಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here