ಜೆ.ಇ.ಇ. ಮೈನ್ಸ್ 2024 -ರಾಷ್ಟ್ರಮಟ್ಟದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ 343ನೇ ರ‍್ಯಾಂಕ್

0

ಪ್ರಮಿತ್ ರೈ 99.84, ಆಕಾಶ್ ಶಿರಂತಡ್ಕ 99.47 ಪರ್ಸೆಂಟೈಲ್ ದಾಖಲು14 ಮಂದಿಗೆ ಶೇಕಡಾ 95ಕ್ಕಿಂತಲೂ ಅಧಿಕ, 28 ಮಂದಿಗೆ 90ಕ್ಕಿಂತಲೂ ಹೆಚ್ಚು ಪರ್ಸೆಂಟೈಲ್ ಅಂಕಗಳು


ಪುತ್ತೂರು: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ರಾಷ್ಟ್ರಮಟ್ಟದ ಜೆಇಇ ಮೈನ್ ಪರೀಕ್ಷೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮೆರೆದಿದ್ದಾರೆ. ಪರೀಕ್ಷೆಗೆ ಹಾಜರಾದ 87 ಮಂದಿ ವಿದ್ಯಾರ್ಥಿಗಳಲ್ಲಿ 81 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಳಿಸಿ ಗಮನ ಸೆಳೆದಿದ್ದಾರೆ. 14 ಮಂದಿ ವಿದ್ಯಾರ್ಥಿಗಳು 95ಕ್ಕಿಂತಲೂ ಅಧಿಕ ಪರ್ಸೆಂಟೈಲ್ ಫಲಿತಾಂಶ ಪಡೆದಿದ್ದು, 28 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿ ಉತ್ಕೃಷ್ಟ ಫಲಿತಾಂಶ ನೀಡಿದ್ದಾರೆ.
ಪುತ್ತೂರು ಕೆದಂಬಾಡಿಯ ಕೆ. ಪುರಂದರ ರೈ ಮತ್ತು ಕೆ ಮೈನಾ ಪಿ ರೈ ದಂಪತಿಯ ಪುತ್ರ ಕೆ ಪ್ರಮಿತ್ ರೈ 99.84 ಪರ್ಸೆಂಟೈಲ್ ಅಂಕಗಳೊಂದಿಗೆ ಇಡಬ್ಲ್ಯುಎಸ್ ವಿಭಾಗದಲ್ಲಿ 343ನೇ ರ‍್ಯಾಂಕ್ ಹಾಗೂ ಸಿಆರ್‌ಎಲ್ ವಿಭಾಗದಲ್ಲಿ 2696ನೇ ರ‍್ಯಾಂಕ್ ಗಳಿಸಿದರೆ, ಕಾಸರಗೋಡು ಪೆರ್ಲದ ಮಧುಸೂದನ ಎಸ್ ಮತ್ತು ಮಮತಾ ದಂಪತಿಯ ಪುತ್ರ ಆಕಾಶ್ ಶಿರಂತಡ್ಕ 99.47 ಪರ್ಸೆಂಟೈಲ್ ಅಂಕಗಳೊಂದಿ ಗೆ ಸಿಆರ್‌ಎಲ್ ವಿಭಾಗದಲ್ಲಿ 8656ನೇ ರ‍್ಯಾಂಕ್ ದಾಖಲಿಸಿ, ರಾಷ್ಟ್ರಮಟ್ಟದಲ್ಲಿ ಸಾಧನೆ ಮೆರೆದಿದ್ದಾರೆ.
ಇನ್ನು, ಕುಶಾಲನಗರದ ಎ ಯು ಸುಂದರೇಶ್ ಮತ್ತು ಎ ಎಸ್ ಕವಿತಾ ದಂಪತಿಯ ಪುತ್ರ ರಾಹುಲ್ ಎ ಎಸ್ 97.94 ಪರ್ಸೆಂಟೈಲ್, ಪುತ್ತೂರು ನರಿಮೊಗರಿನ ಡಾ. ರಾಮಮೋಹನ್ ಎಸ್ ಮತ್ತು ಸಂಧ್ಯಾ ಎಸ್ ದಂಪತಿಯ ಪುತ್ರಿ ಶಾರ್ವರಿ ಎಸ್ 97.90 ಪರ್ಸೆಂಟೈಲ್, ಪುತ್ತೂರು ಕೆದಂಬಾಡಿಯ ಸತೀಶ್ ನಾಯಕ್ ಪಿ ಮತ್ತು ಲಾವಣ್ಯ ಎಮ್ ಬಿ ದಂಪತಿಯ ಪುತ್ರಿ ಶೃಂಗ ನಾಯಕ್ ಪಿ 97.31 ಪರ್ಸೆಂಟೈಲ್, ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅನುಶ್ರೀ ಎ ಎಸ್ 96.79 ಪರ್ಸೆಂಟೈಲ್, ಬಂಟ್ವಾಳ ಪೆರಮೊಗ್ರುವಿನ ಕೆ ವಿ ತಿರುಮಲೇಶ್ವರ ಭಟ್ ಮತ್ತು ಕೆ ಟಿ ಆಶಾ ದಂಪತಿಯ ಪುತ್ರ ಅಭಿರಾಮ ಕೆ. ಟಿ 96.71 ಪರ್ಸೆಂಟೈಲ್, ಬಂಟ್ವಾಳದ ಕುಡುಪಲ್ಲತಡ್ಕದ ವೆಂಕಪ್ಪ ಶರ್ಮ ಕೆ ಮತ್ತು ಸಹನಾ ಬಿ ದಂಪತಿಯ ಪುತ್ರ ವಿಶಾಂತ್ 96.16 ಪರ್ಸೆಂಟೈಲ್, ಬಂಟ್ವಾಳ ಕೊಳ್ನಾಡಿನ ಶಶಿಧರ ಭಂಡಾರಿ ಮತ್ತು ಸಂಧ್ಯಾ ಎಸ್ ಭಂಡಾರಿ ದಂಪತಿಯ ಪುತ್ರ ಅನುನಯ ಎಸ್ ಭಂಡಾರಿ 95.72 ಪರ್ಸೆಂಟೈಲ್, ಕಡಬ ಕಾಣಿಯೂರಿನ ನಿರಂಜನ ಕೆ ಎನ್ ಮತ್ತು ಸ್ವರ್ಣಲತಾ ಎನ್ ಆಚಾರ್ಯ ದಂಪತಿಯ ಪುತ್ರ ನಿಧಿ ಎನ್ ಆಚಾರ್ಯ 95.62 ಪರ್ಸೆಂಟೈಲ್, ಬಂಟ್ವಾಳ ಅಡ್ಯನಡ್ಕದ ವಿಶ್ವನಾಥ್ ಎಂ ಮತ್ತು ರಮ್ಯ ಎಮ್ ದಂಪತಿಯ ಪುತ್ರ ವರುಣ್ ಎಮ್ 95.43 ಪರ್ಸೆಂಟೈಲ್, ಸುಳ್ಯ ಜಯನಗರದ ಶ್ರೀಧರ ಎ ಮತ್ತು ಮಾಲಿನಿ ಎನ್ ದಂಪತಿಯ ಪುತ್ರಿ ಅಭಿಶ್ರೀ ಎ ಎಸ್ 95.16 ಪರ್ಸೆಂಟೈಲ್, ಪುತ್ತೂರು ಸಾಮೆತಡ್ಕದ ಎಮ್ ಪ್ರತಾಪ್‌ಚಂದ್ರ ರೈ ಮತ್ತು ಶಶಿಕಲಾ ಪಿ ರೈ ದಂಪತಿಯ ಪುತ್ರ ಗಗನ್‌ದೀಪ್ ರೈ 95.09 ಪರ್ಸೆಂಟೈಲ್, ಪುತ್ತೂರು ದರ್ಬೆಯ ರಾಮಕೃಷ್ಣ ಪ್ರಕಾಶ್ ಬಿ ಮತ್ತು ಸುಜಾತ ಎಮ್ ದಂಪತಿಯ ಪುತ್ರ ಚೈತನ್ಯ ಬಿ 95 ಪರ್ಸೆಂಟೈಲ್ ಗಳಿಸಿ ಅತ್ಯುತ್ತಮ ರ‍್ಯಾಂಕ್ ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು ಹಾಗೂ ಬೋಧಕ – ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here