ಎರಡು ತಿಂಗಳ ವೇತನ ವಿಳಂಬ- ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸಂಘದಿಂದ ಶಾಸಕರಿಗೆ ಮನವಿ

0


ಪುತ್ತೂರು: ಕಳೆದ ಎರಡು ತಿಂಗಳ ವೇತನ ವಿಳಂಬವಾಗಿದ್ದು ಶೀಘ್ರ ವೇತನಕ್ಕೆ ಆಗ್ರಹಿಸಿ ಪುತ್ತೂರು ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಶಾಸಕರು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ವಾರದೊಳಗೆ ವೇತನ ಪಾವತಿಸುವಂತೆ ಮತ್ತು ವಿಳಂಬವಾಗದ ಹಾಗೆ ನೋಡಿಕೊಳ್ಳುವಂತೆ ಸೂಚಿಸಿದರು.ಈ ಸಂದರ್ಬದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಕಮಲ,ಕಾರ್ಯದರ್ಶಿ ಪುಷ್ಪಲತಾ,ಖಜಾಂಜಿ ಶೈಲಜ,ಉಪಾಧ್ಯಕ್ಷೆ ಸಂಧ್ಯ,ಮಾಜಿ ಜಿಲ್ಲಾಧ್ಯಕ್ಷರಾದ ಅರುಣ.ಡಿ ,ಮಾಜಿ ಕಾರ್ಯದರ್ಶಿ ಜಯಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here