ಪುತ್ತೂರು- ವಿಟ್ಲ ಸರಕಾರಿ ಬಸ್ ವ್ಯತ್ಯಯ- ವಕೀಲರಿಂದ ಶಾಸಕರಿಗೆ ಮನವಿ

0

ಪುತ್ತೂರು: ಪುತ್ತೂರಿನಿಂದ ವಿಟ್ಲಕ್ಕೆ ಸಂಚರಿಸುತ್ತಿದ್ದ ಸಂಜೆಯ ಬಸ್‌ ಮತ್ತು ಬಿಸಿರೋಡ್‌ ನಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬೆಳಗ್ಗಿನ ಕೆಎಸ್ಆರ್ ಟಿಸಿ ಬಸ್‌ ಕಳೆದ ನಾಲ್ಕು ತಿಂಗಳಿಂದ ಸಂಚಾರವನ್ನು ರದ್ದು ಮಾಡಲಾಗಿದ್ದು ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕೆಂದು ಶಾಸಕ ಅಶೋಕ್‌ ರೈ ರವರಿಗೆ ವಿಟ್ಲ‌ ಭಾಗದ ವಕೀಲರು ಮನವಿ‌ ಮಾಡಿದ್ದಾರೆ.

ಸಂಜೆ 7 ಮತ್ತು ಬೆಳಿಗ್ಗೆ ಬಿಸಿರೋಡ್‌ ನಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿಂದ ಸಂಚಾರ ನಿಲ್ಲಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಈ ಬಗ್ಗೆ ಕೆಎಸ್ ಆರ್ ಟಿಸಿ ಅಧಿಕಾರಿಗಳ‌ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ‌ ನೀಡಿದರು. ಈ ಸಂದರ್ಬದಲ್ಲಿ ವಕೀಲರಾದ ಅಶೋಕ್ ಸಿ ಎಚ್, ಸುಪ್ರಿತಾ, ಚಂದ್ರಹಾಸ,ಸಂತೋಷ್ ಕೆ ಆರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here