ಆರ್ಯಾಪು-ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನದ ವಾರ್ಷಿಕ ಮಾರಿ ಪೂಜೆ-ಗೊನೆ ಮುಹೂರ್ತ

0

ಪುತ್ತೂರು; ಶ್ರೀ ಅಮ್ಮನವರ ದೇವಸ್ಥಾನ ಆರ್ಯಾಪು ನೇರಳಕಟ್ಟೆ ಶ್ರೀ ಕ್ಷೇತ್ರದ ವಾರ್ಷಿಕ ಮಾರಿ ಪೂಜೆಯು ಮೇ.16 ಮತ್ತು 17ರಂದು ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನಾಗೇಶ ತಂತ್ರಿ ಕೆಮ್ಮಿಂಜೆರವರ ನೇತೃತ್ವದಲ್ಲಿ ನಡೆಯಲಿದೆ.
ಈ ಮಹಾ ಉತ್ಸವಕ್ಕೆ ಗೊನೆ ಮುಹೂರ್ತವು ಮೇ 10 ರಂದು ನೆರವೇರಿತು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಆಚಾರ್ಯ, ಸಮಿತಿಯ ಸದಸ್ಯರಾದ ಆನಂದ ಅಮೀನ್ ಹೊಸಮನೆ , ಶೇಷಪ್ಪ ಗೌಡ ನಿವೃತ್ತ (ಪಿಎಸ್ಐ) , ಚಂದ್ರಕಲಾ ರವಿಪ್ರಕಾಶ್ ಗೌಡ, ಧನುಷ್ ಹೊಸಮನೆ, ಜಿನ್ನಪ್ಪ ಮಡಿವಾಳ ನೇರಳಕಟ್ಟೆ, ಕ್ಷೇತ್ರದ ಅನುವಂಶಿಕ ಆಡಳಿತ ಮುಕ್ತೇಸರ ಗಂಗಾಧರ ಸೀಗೆಬಲ್ಲೆ ವಿಟ್ಲ, ರಾಮ ಕಾರೆಕ್ಕಾಡು, ಗೋಪಾಲ ಬೆಟ್ಟಂಪಾಡಿ, ಕೋಶಾಧಿಕಾರಿ ಸುರೇಶ್ ಪಿ, ಹರೀಶ, ಯೋಗೇಶ , ಚಿದಾನಂದ, ವಸಂತ , ಕ್ಷೇತ್ರದ ಪ್ರಧಾನ ಅರ್ಚಕ ಸುನಿಲ್ ಮಚ್ಚೇಂದ್ರ ಸಹಿತ ಹಲವಾರು ಭಕ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here