ಈಶ್ವರಮಂಗಲ: ಕಾರಿಗೆ ಸ್ಕೂಟರ್ ಡಿಕ್ಕಿ-ಸ್ಕೂಟರ್ ಸವಾರ ಗಂಭೀರ ಗಾಯ

0

ಈಶ್ವರಮಂಗಲ:ಮೇ 15ರಂದು ಪಂಚೋಡಿ ಕರ್ನೂರು ರಸ್ತೆಯ ಸುರುಳಿಮೂಲೆ ಎಂಬಲ್ಲಿ ಕರ್ನೂರು ಕಡೆಯಿಂದ ಬರುತ್ತಿದ್ದ ಕಾರೊಂದು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಸ್ಕೂಟರ್ ಒಂದಕ್ಕೆ ಡಿಕ್ಕಿ ಹೊಡೆದಿದ್ದು ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡು ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ನುಜ್ಜುಗುಜ್ಜಾಗಿದ್ದು ಸ್ಕೂಟರ್ ನಲ್ಲಿದ್ದ ಹಿಂಬದಿ ಸವಾರ ಅಲ್ಪ ಸ್ವಲ್ಪ ಗಾಯಗೊಂಡಿದ್ದಾರೆ. ಇಲ್ಲಿನ ಇಳಿಜಾರು ರಸ್ತೆ ತಿರುವಿನಲ್ಲಿ ನಡೆದ ಘಟನೆಯಾಗಿದ್ದು ಕಾರು ಸಂಪೂರ್ಣ ಬಲಬದಿಯಿಂದ ಬಂದಿರುವುದರಿಂದ ಡಿಕ್ಕಿ ಹೊಡೆದಿದೆ.ಈ ಸ್ಥಳದಲ್ಲಿ ಹಿಂದೆಯೂ ಕೆಲವೊಂದು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here