ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿರುವ ಅಪಾಯಕಾರಿ ಮರ ತೆರವು- ಸುದ್ದಿ ವರದಿಯ ಫಲಶೃತಿ

0

ಆಲಂಕಾರು: ಉಪ್ಪಿನಂಗಡಿ, ಕಡಬ ,ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಅಪಾಯಕಾರಿ ಮರ ತೆರವಿಗೆ ಸಾರ್ವಜನಿಕರು ಆಗ್ರಹಿಸಿದ್ದರು. ಕೊಯಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ಆತೂರು ಎಂಬಲ್ಲಿ ತಿರುವಿನಲ್ಲೆ ಅಪಾಯಕಾರಿ ಮರವಿದ್ದು ಇಲ್ಲಿ ಅನೇಕ ಭಾರಿ ಅಪಘಾತಗಳು ಸಂಭವಿಸಿದೆ. ರಾಜ್ಯ ಹೆದ್ದಾರಿಯಲ್ಲಿ ಪಿ.ಡಬ್ಲೂ.ಡಿ ರಸ್ತೆಗೆ ತಾಗಿಕೊಂಡಿರುವ ಮರದಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಚಲಿಸುತ್ತಿರುವ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ ಮರಕ್ಕೆ ಗುದ್ದಿ ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿತ್ತು.

ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳಿಗೆ ಮೌಖಿಕವಾಗಿ ದೂರು ನೀಡಲಾಗಿತ್ತು.ಈ ಬಗ್ಗೆ ಸುದ್ದಿ ಪತ್ರಿಕೆ,ವೆಬ್ಸೈಟ್‌ ನಲ್ಲಿ ವರದಿ ಪ್ರಕಟಗೊಂಡಿತ್ತು. ಇದೀಗ ಸುದ್ದಿ ಪತ್ರಿಕೆಯ ವರದಿಯ ಫಲಶೃತಿ ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗು ಸಿಬ್ಬಂದಿಗಳ ಮುತುವರ್ಜಿಯಿಂದ ಅಪಾಯಕಾರಿ ಮರ ತೆರವುಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಸಂತೋಷ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here