ಹಣಕೊಡದಿದ್ದರೆ ಅಂಡರ್‌ವರ್ಲ್ಡ್ ರೌಡಿಗಳ ಮೂಲಕ ಕೊಲೆ-ಪಿಡಬ್ಲ್ಯೂಡಿ ಗುತ್ತಿಗೆದಾರನಿಗೆ ಬೆದರಿಕೆ ಪ್ರಕರಣದ ಆರೋಪಿಗೆ ಜಾಮೀನು

0

ಪುತ್ತೂರು:ಬರುವ ಲಾಭದಲ್ಲಿ ನನಗೆ ಸ್ವಲ್ಪ ಹಣಕೊಡಬೇಕು.ಇಲ್ಲವಾದಲ್ಲಿ ಅಂಡರ್‌ವರ್ಲ್ಡ್ ರೌಡಿಗಳಲ್ಲಿ ಹೇಳಿ ಕೊಲೆ ಮಾಡುವುದಾಗಿ ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಓರ್ವರಿಗೆ ಬೆದರಿಕೆ ಒಡ್ಡಿದ್ದ ಪ್ರಕರಣದ ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಂಗಳೂರಿನ ರಿತೇಶ್ ಶೆಟ್ಟಿ ಎಂಬವರು ನೀಡಿದ ದೂರಿನ ಮೇರೆಗೆ ಮುನ್ನ ಯಾನೆ ಗೋಪಾಲ ಶೆಟ್ಟಿ ಪೆರ್ನೆ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಸೆಕ್ಷನ್ ೪೪೭,೫೦೪,೩೮೭, ೩೪ ಐಪಿಸಿಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.ರಿತೇಶ್ ಶೆಟ್ಟಿಯವರು ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು ಸಂದೇಶ್ ಎಂಬವರು ಸದ್ರಿ ಕೆಲಸವನ್ನು ನೋಡಿಕೊಳ್ಳುತ್ತಿದ್ದಾರೆ.ಪ್ರಸ್ತುತ ಬಂಟ್ವಾಳ ಬಿಳಿಯೂರು ಗ್ರಾಮದ ಬಿಳಿಯೂರು ಮತ್ತು ಇತರ ಕಡೆಗಳಲಿ ನಡೆಸುವ ಕಾಮಗಾರಿಯ ವಿಚಾರದಲ್ಲಿ ಮುನ್ನ ಯಾನೆ ಗೋಪಾಲ ಶೆಟ್ಟಿ ಎಂಬಾತ, ರಿತೇಶ್ ಶೆಟ್ಟಿಯವರ ಕೆಲಸ ಕಾರ್ಯ ನೋಡಿಕೊಳ್ಳುತ್ತಿರುವ ಸಂದೇಶ್ ಎಂಬವರಿಗೆ ಕರೆ ಮಾಡಿ, ನಿಮ್ಮ ಕೆಲಸದಲ್ಲಿ ಹೆಚ್ಚಿನ ಲಾಭ ಗಳಿಸುತ್ತೀರಿ,ನನಗೆ ಅದರಿಂದ ಹಣವನ್ನು ಕೊಡಬೇಕು ಎಂದು ಹೇಳಿದ್ದು, ಸಂದೇಶ್ ಅವರು ರಿತೇಶ್ ಶೆಟ್ಟಿಯವರಿಗೆ ರಾತ್ರಿ ವೇಳೆ ಕರೆ ಮಾಡಿ ಅವರ ಮೊಬೈಲ್ ನಂಬ್ರಕ್ಕೆ ಕಾನ್ಫರೆನ್ಸ್ ಮೂಲಕ ಕಾಲ್ ಮಾಡಿ ರಿತೇಶ್ ಶೆಟ್ಟಿಯವರು ಮುನ್ನ ಯಾನೆ ಗೋಪಾಲ ಶೆಟ್ಟಿ ಜೊತೆ ಮಾತನಾಡುತ್ತಿದ್ದಾಗ, ‘ನಿಮ್ಮ ವ್ಯವಹಾರದಲ್ಲಿ ನನಗೆ ಹಣ ನೀಡಬೇಕು’ ಎಂದಿದ್ದು, ನಿನಗೇಕೆ ಹಣ ನೀಡಬೇಕು ಎಂದು ರಿತೇಶ್ ಶೆಟ್ಟಿಯವರು ಆತನಲ್ಲಿ ಕೇಳಿದರು.ಈ ವೇಳೆ ಆರೋಪಿ ಮುನ್ನ ಯಾನೆ ಗೋಪಾಲ ಶೆಟ್ಟಿ ಅವಾಚ್ಯವಾಗಿ ಬೈದು, ನನಗೆ ಸ್ವಲ್ಪ ಹಣ ಕೊಡಬೇಕು.ಕೊಡದೇ ಇದ್ದಲ್ಲಿ ನನಗೆ ಪರಿಚಯ ಇರುವ ಅಂಡರ್‌ವರ್ಲ್ಡ್ ರೌಡಿಗಳಲ್ಲಿ ತಿಳಿಸಿ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಲ್ಲದೆ, ಮೇ ೧೭ರಂದು ಬೆಳಿಗ್ಗೆ ಮುನ್ನ ಯಾನೆ ಗೋಪಾಲ ಶೆಟ್ಟಿ ಇತರ ಇಬ್ಬರೊಂದಿಗೆ ಬಿಳಿಯೂರಿನಲ್ಲಿರುವ ಸೈಟ್‌ಗೆ ಹೋಗಿ, ತನ್ನ ಇರುವಿಕೆಯ ಬಗ್ಗೆ ಕೆಲಸಗಾರರಲ್ಲಿ ವಿಚಾರಿಸಿಕೊಂಡು ಹೋಗಿರುವುದಾಗಿ ರಿತೇಶ್ ಶೆಟ್ಟಿಯವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮುನ್ನ ಯಾನೆ ಗೋಪಾಲ ಶೆಟ್ಟಿಯವರನ್ನು ಬಂಧಿಸಿದ್ದರು.ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ಪುತ್ತೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲರಾದ ಜಿ.ಜಗನ್ನಾಥ ರೈ, ಅಕ್ಷತಾ ಜೆ.ಕೆ.,ಸ್ವಾತಿ ಜೆ.ರೈ ಮತ್ತು ವಿನಯ್ ಎಸ್.ಕೆ.ವಾದಿಸಿದ್ದರು.

LEAVE A REPLY

Please enter your comment!
Please enter your name here