ನೆಲಮಂಗಲದಲ್ಲಿ ಲಾರಿ,ಬೈಕ್ ಮಧ್ಯೆ ಅಪಘಾತ-ಬೈಕ್ ಸವಾರ ರೆಖ್ಯ ನಿವಾಸಿ ತೋಮಸ್ ಮೃತ್ಯು

0

ನೆಲ್ಯಾಡಿ: ಬೆಂಗಳೂರಿನ ನೆಲಮಂಗಲದಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ರೆಖ್ಯ ಸಮೀಪದ ಎಂಜಿರ ಪರಕ್ಕಳದ ನಿವಾಸಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮೇ .30ರಂದು ನಡೆದಿದೆ.


ಪರಕ್ಕಳ ನಿವಾಸಿ ಸ್ನೇರಿಯಾ ಎಂಬವರ ಪುತ್ರ, ನರ್ಸಿಂಗ್ ವಿದ್ಯಾರ್ಥಿ ತೋಮಸ್(19ವ.)ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರು ಮೇ.30ರಂದು ಬೆಳಗ್ಗಿನ ಜಾವ ನಾಲ್ಕು ಗಂಟೆ ವೇಳೆಗೆ ಪರಕ್ಕಳದ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳಿದ್ದರು. ನೆಲಮಂಗಲದಲ್ಲಿ ಇವರು ಚಲಾಯಿಸುತ್ತಿದ್ದ ಬೈಕ್ ಹಾಗೂ ಲಾರಿ ಮಧ್ಯೆ ಅಪಘಾತವಾಗಿದೆ. ಲಾರಿಯಡಿಗೆ ಬಿದ್ದು ತೋಮಸ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೃತರು ತಂದೆ, ತಾಯಿ, ಅಕ್ಕ ಹಾಗೂ ಅಣ್ಣನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here