ಪಾಲ್ತಾಡಿ : ಮಗಳ ಸ್ಮರಣಾರ್ಥ ವಿದ್ಯಾರ್ಥಿನಿಯ ಶೈಕ್ಷಣಿಕ ವೆಚ್ಚ ಭರಿಸಿದ ಅಶ್ರಫ್ ಕಾಸಿಲೆ

0

ಸವಣೂರು : ತನ್ನ ಮಗಳ ಸ್ಮರಣಾರ್ಥ ವಿದ್ಯಾರ್ಥಿನಿಯೋರ್ವಳ ವಿದ್ಯಾಭ್ಯಾಸಕ್ಕೆ ನೆರವಾಗುವ ಇಚ್ಛೆಯಿಂದ ಪಾಲ್ತಾಡಿ ಗ್ರಾಮದ ಬೊಮ್ಮಂತ ಗುಂಡಿಯ ವಿದ್ಯಾರ್ಥಿನಿಗೆ ಧನ ಸಹಾಯ ನೀಡುವ ಮೂಲಕ ಸವಣೂರಿನ ಅಶ್ರಫ್ ಕಾಸಿಲೆಯವರು ಮಾದರಿಯಾಗಿದ್ದಾರೆ.

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷರಾಗಿರುವ ಅಶ್ರಫ್ ಕಾಸಿಲೆ ಅವರು ವಿದ್ಯಾರ್ಥಿನಿಯ ಪ್ರತಿ ತಿಂಗಳ ಕಾಲೇಜು ಶುಲ್ಕ ಭರಿಸುವ ಮೂಲಕ ಸಹಾಯ ನೀಡುತ್ತಾ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಸಹಾಯಧನ ನೀಡುವ ಸಂಧರ್ಭದಲ್ಲಿ ಸುಳ್ಯ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಇಂದಿರಾ ಬಿ ಕೆ. ಮತ್ತು ವಿದ್ಯಾರ್ಥಿನಿಯ ಮನೆಯವರು ಜೊತೆಗಿದ್ದರು.

LEAVE A REPLY

Please enter your comment!
Please enter your name here