




ಕಾಣಿಯೂರು: ಗಂಗೂಬಾಯಿ ಹಾನಗಲ್ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ನಡೆಸಿದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಕುದ್ಮಾರು ದೋಳ ಸಮನ್ವಿ ಪಿ. ಡಿ ಅವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ವಿದ್ವಾನ್ ಗೋಪಾಲಕೃಷ್ಣ ಕೆ ವೀರಮಂಗಲ ಅವರ ಶಿಷ್ಯೆಯಾಗಿರುವ ಇವರು ಕುದ್ಮಾರು ಶಾಖಾ ಅಂಚೆ ಪಾಲಕರಾದ ಪದ್ಮನಾಭ
ದೋಳ ಮತ್ತು ಸತ್ಯಪ್ರಿಯಾ ದಂಪತಿಗಳ ಪುತ್ರಿ.










