![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2024/06/ಜಹಗ-1.jpg)
ಪುತ್ತೂರು: ಭಾರಿ ಮಳೆಗೆ ದರ್ಬೆಯಲ್ಲಿ ಕಿರಿದಾದ ರಾಜಕಾಲುವೆಯಿಂದ ಉಕ್ಕಿದ ಮಳೆ ನೀರು ಮನೆಯೊಳಗೆ ನುಗ್ಗಿ ಮನೆ ಸಾಮಾಗ್ರಿಗಳೆಲ್ಲ ನೀರಿನಲ್ಲಿ ಮುಳುಗಿದ ಘಟನೆ ಜೂ.3ರಂದು ನಡೆದಿದೆ.
ದರ್ಬೆ ನಿವೃತ್ತ ಶಿಕ್ಷಕರೊಬ್ಬರ ಮನೆಯೊಳಗೆ ಪಕ್ಕದ ಕಿರಿದಾದ ರಾಜಕಾಲುವೆಯಿಂದ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಕೃತಕ ನೆರೆಯುಂಟಾಗಿ ಮನೆಯೊಳಗೆ ನೀರು ನುಗ್ಗಿದೆ. ಮನೆಯೊಳಗಿನ ಸಾಮಾಗ್ರಿಗಳೆಲ್ಲ ಮಳೆ ನೀರಿಗೆ ಒದ್ದೆಯಾಗಿದೆ. ಕಳೆದ ಹಲವು ವರ್ಷಗಳಿಂದ ಕಿರಿದಾದ ರಾಜಕಾಲುವೆಯ ಸಮಸ್ಯೆಯಿಂದಾಗಿ ಪ್ರವಾಹ ಉಂಟಾಗುತ್ತಿದೆ.