ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು – ರಾಮಕುಂಜ,ಕೊಲ, ಹಳೆನೇರೆಂಕಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ರಾಮಕುಂಜ: ದ.ಕ.ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಅವರ ಭರ್ಜರಿ ಗೆಲುವು ಹಾಗೂ ಕೇಂದ್ರದಲ್ಲಿ ಎನ್‌ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಮಕುಂಜ, ಕೊಯಿಲ, ಹಳೆನೇರೆಂಕಿಯಲ್ಲಿ ಬಿಜೆಪಿ ಕಾರ್ಯಕರ್ತರು ಜೂ.೪ರಂದು ಸಂಜೆ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು.
ರಾಮಕುಂಜ ಗಣೇಶ್‌ನಗರ, ಗೋಳಿತ್ತಡಿ, ಕೊಯಿಲ, ರಾಮಕುಂಜ, ಹಳೆನೇರೆಂಕಿಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂಭ್ರಮಿಸಿದರು. ಬಿಜೆಪಿ ಮುಖಂಡರಾದ ಧರ್ಮಪಾಲ ರಾವ್, ಶೀನಪ್ಪ ಗೌಡ ವಳಕಡಮ, ಯದುಶ್ರೀ ಆನೆಗುಂಡಿ, ಜಯಂತಿ ಆರ್.ಗೌಡ, ತೇಜಸ್ವಿನಿಶೇಖರ ಗೌಡ, ಪುಷ್ಪಾಸುಭಾಸ್ ಆರುವಾರ, ಸುಚೇತಾ, ಹೇಮಾ ಮೋಹನದಾಸ್ ಶೆಟ್ಟಿ, ಕೇಶವ ಗಾಂಧಿಪೇಟೆ, ಲಕ್ಷ್ಮೀನಾರಾಯಣ ರಾವ್ ಆತೂರು, ಸದಾಶಿವ ಶೆಟ್ಟಿ ಮಾರಂಗ, ಪ್ರಶಾಂತ್ ಆರ್.ಕೆ., ಯತೀಶ್‌ಕುಮಾರ್, ಚಿದಾನಂದ ಪಾನ್ಯಾಲ್, ಸುಧೀಶ್ ಪಟ್ಟೆ, ರಾಮಚಂದ್ರ ಏಣಿತ್ತಡ್ಕ, ತಿಮ್ಮಪ್ಪ ಗೌಡ ಸಂಕೇಶ, ಉಮೇಶ್ ಸಂಕೇಶ, ಬಾಲಕೃಷ್ಣ ಗೌಡ ಬೇಂಗದಪಡ್ಪು, ವಿನಯಕುಮಾರ್ ಕೊಯಿಲ, ಮಹೇಶ್ ಪಾತೃಮಾಡಿ, ಸುಭಾಸ್ ಶೆಟ್ಟಿ ಆರುವಾರ, ಶರತ್‌ಕುಮಾರ್ ಕೆದಿಲ ಸೇರಿದಂತೆ ಹಲವು ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here