ಇಂದು ಕಾವು ಶಾಲೆಯ ಶಿಕ್ಷಕ ಭಾಸ್ಕರ ಗೌಡರಿಗೆ ವಿದಾಯ ಸಮಾರಂಭ

0

ಪುತ್ತೂರು: ಕಾವು ಸರಕಾರಿ ಉ ಪ್ರಾ ಶಾಲೆಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ ಮೇ. 31 ರಂದು ನಿವೃತ್ತರಾದ ಭಾಸ್ಕರ ಗೌಡ ನರಿಯೂರು ಅವರಿಗೆ ವಿದಾಯ ಸಮಾರಂಭವು ಜೂ. 8 ರಂದು ಶಾಲಾ ವಠಾರದಲ್ಲಿ ನಡೆಯಲಿದೆ.


ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಇವರು ಶಾಲೆಯ ಅಭಿವೃದ್ದಿಗಾಗಿ ಅನೇಕ ಸೇವೆಗಳನ್ನು ಸಲ್ಲಿಸಿದ್ದರು. ಪುತ್ತೂರು ಶಾಸಕರಾದ ಅಶೋಕ್ ರೈಯವರು ವಿದಾಯ ಸನ್ಮಾನ ಮಾಡಲಿದ್ದು,ಶಾಲೆಯ ದತ್ತುಪಡೆದುಕೊಂಡಿರುವ ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಮೂರ್ಜೆ ಕನಕಮಜಲು ಅಭಿನಂದನಾ ಭಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರಾದ ಯತೀಶ್‌ಪೂಜಾರಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮೊದಲಾದವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here