ದೈಪಿಲ- ಹೆಚ್ ಟಿ ಹಾಗೂ ಎಲ್ ಟಿ ಲೈನ್ ಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಕಾಣಿಯೂರು: ಚಾರ್ವಾಕ ಗ್ರಾಮದ ಕೆಳಗಿನ ಕೇರಿ ಕೊಪ್ಪದಿಂದ ಮುಂಗ್ಲಿಮಜಲು ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆ ಯಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ವಿದ್ದುತ್ ಬಳಕೆದಾರರು ಶ್ರಮದಾನದ ಮೂಲಕ ಮಾಡಿದರು.

ದೈಪಿಲ ಕ್ರೀಡಾ ಸಂಘದ ಅಧ್ಯಕ್ಷ ರಾಜೇಶ್ ಖಂಡಿಗ ನೇತ್ರತ್ವದಲ್ಲಿ ಸವಣೂರು ಮೆಸ್ಕಾಂನ ಮೆಕಾನಿಕ್ ಉಮೇಶ್ ಹಾಗೂ ಪವರ್ ಮ್ಯಾನ್ ಮುಕ್ತಾರ್ ಇವರ ಮಾರ್ಗದರ್ಶನದಲ್ಲಿ ಸುಮಾರು 2 ಕೀ ಮೀ ವರೆಗೆ ತೆರವು ಕಾರ್ಯ ನಡೆಯಿತು, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ಪ್ರವೀಣ್ ಕುಂಟ್ಯಾನ , ಬೇಳಿಯಪ್ಪ ದೆವಸ್ಯ, ಜನಾರ್ಧನ, ಹರೀಶ್, ರಾಹುಲ್, ಕೆಳಗಿನಕೇರಿ, ಡಿವಿಷ್ ಖಂಡಿಗ, ತಾರಾನಾಥ, ಸಿರಿಲ್ ವಿಶ್ವನಾಥ, ಹರೀಶ್, ಹಿತೇಶ್, ಹರ್ಷಿತ್ ಖಂಡಿಗ, ಗಣೇಶ್, ವಿಜಯ ಬೈಲು ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here