ಕನ್ನಡ ಸಾಹಿತ್ಯ ಪರಿಷತ್‌ನಿಂದ ‘ಕನ್ನಡ ಪ್ರತಿಭೆ’ ಪ್ರಶಸ್ತಿ ಪುರಸ್ಕಾರ

0

ಪುತ್ತೂರು:2023-24ನೇ ಶೈಕ್ಷಣಿಕ ವರ್ಷದಲ್ಲಿ ಕನ್ನಡವನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡು ಕನ್ನಡ ವಿಷಯದಲ್ಲಿ ಶೇ.100 ಅಂಕ ಪಡೆದ ಮತ್ತು 10ನೇ ತರಗತಿಯಲ್ಲಿ 605ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಕನ್ನಡ ಪ್ರತಿಭೆ ಪ್ರಶಸ್ತಿ’ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮ ಜೂ.15ರಂದು ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಮಧ್ಯಾಹ್ನ ನಡೆಯಿತು.


ಶ್ರಮ,ಪ್ಲ್ಯಾನಿಂಗ್, ಸಿನ್ಸಿಯಾರಿಟಿ ಅಗತ್ಯ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಇವತ್ತು ಪ್ರಯತ್ನ ಮಾಡಿದರೆ ಏನೂ ಮಾಡಬಹುದು ಎಂಬುದಕ್ಕೆ ಉದಾಹರಣೆ ನಮ್ಮ ಸಹಾಯಕ ಕಮಿಷನರ್ ಜುಬಿನ್ ಮೊಹಪಾತ್ರ. ನಾನು ಕೂಡಾ ತುಂಬಾ ಜನರನ್ನು ಟ್ರಸ್ಟ್ ಮೂಲಕ ಐಎಎಸ್ ಪರೀಕ್ಷೆಗೆ ಪ್ರೋತ್ಸಾಹ ನೀಡಿದ್ದೆ.ಆದರೆ ಅವರು ಯಾರು ಕೂಡಾ ಪಾಸ್ ಆಗಿಲ್ಲ.ಆದರೆ ಅವರೆಲ್ಲ ಕೆಎಎಸ್ ಪರೀಕ್ಷೆ ಉತ್ತೀರ್ಣರಾಗಿ ಇವತ್ತು ಉತ್ತಮ ಸರಕಾರಿ ಕೆಲಸದಲ್ಲಿದ್ದಾರೆ.ಈ ನಿಟ್ಟಿನಲ್ಲಿ ನಮ್ಮ ಕನಸು ಹಲವು ಇರುತ್ತದೆ.ಅದನ್ನು ನನಸಾಗಿಸುವ ನಿಟ್ಟಿನಲ್ಲಿ ಛಲದಿಂದ ಪ್ರಯತ್ನ ಪಟ್ಟಾಗ ಅದನ್ನು ಸಾಽಸಲಾಗದಿದ್ದರೂ ಮತ್ತೊಂದು ಉತ್ತಮ ಸಾಧನೆ ಮಾಡಬಹುದು.ಶ್ರಮ, ಪ್ಲ್ಯಾನಿಂಗ್, ಸಿನ್ಸಿಯಾರಿಟಿ ಇದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂದರಲ್ಲದೆ, ಕನಸು ಕಾಣುವ ಜೊತೆಗೆ ಪ್ರಾಮಾಣಿಕತೆಯೂ ಬೇಕು ಎಂದರು.


ಅವಕಾಶ ತುಂಬಾ ಇದೆ-ಗುರಿ ನಿಮ್ಮಲ್ಲಿರಲಿ:
ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಅವರು ಮಾತನಾಡಿ ಇವತ್ತಿನ ವಿದ್ಯಾರ್ಥಿಗಳು ತುಂಬಾ ಯಂಗ್ ಇದ್ದೀರಿ.ನೀವು ಯಾವತ್ತೂ ಕೂಡಾ ಸ್ಪೂರ್ತಿಯಲ್ಲಿ ಇರಬೇಕು.ನೀವು ಐಎಎಸ್, ಐಪಿಎಸ್ ಮಾಡಲೇ ಬೇಕೆಂದೇನಿಲ್ಲ.ನಿಮ್ಮಲ್ಲಿ ಗುರಿ ಇರಲಿ.ಅವಕಾಶ ತುಂಬಾ ಇದೆ.ಕಷ್ಟಪಟ್ಟು ಶ್ರಮ ಹಾಕಿದರೂ ಒಂದೊಂದು ಬಾರಿ ಅಪೇಕ್ಷೆಗೆ ತಕ್ಕಂತೆ -ಲಿತಾಂಶ ಬರುವುದಿಲ್ಲ.ಆಗ ಅದಕ್ಕೆ ಆತ್ಮಹತ್ಯೆ ಪರಿಹಾರವಲ್ಲ.ಆತ್ಮವಿಶ್ವಾಸ ಪರಿಹಾರ ಆಗುತ್ತದೆ ಎಂದರು.ಏನೇ ಸಾಧನೆ ಮಾಡುವುದಾದರು ಮೊದಲು ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಬೇಕು.ದೊಡ್ಡ ಅಽಕಾರಿಯಾಗಿ ಕೆಟ್ಟ ಕೆಲಸ ಮಾಡಿದರೆ ದೇಶಕ್ಕೆ ಹಾನಿ ಎಂದ ಅವರು ಇವತ್ತಿನ ವಿದ್ಯಾರ್ಥಿಗಳು ಒಂದು ಚೌಕಟ್ಟಿನೊಳಗೆ ಇದ್ದಾರೆ.ನೀವು ಅದರಿಂದ ಹೊರ ಬನ್ನಿ. ಹಿರಿಯರ ಅನುಭವ ಪಡೆದು ಕೊಳ್ಳಿ.ಕಡಿಮೆ ಪಕ್ಷ ರಾಷ್ಟ್ರೀಯ ಮತ್ತು ಒಂದು ಲೋಕಲ್ ಪತ್ರಿಕೆಯನ್ನು ದಿನಾ ಓದಿ.ಕೇವಲ ಸಾಮಾಜಿಕವಾಗಿ ಅಲ್ಲ.ಸಂವಿಧಾನದಲ್ಲಿ ಏನಿದೆ ಎಂದು ತಿಳಿದು ಕೊಳ್ಳಿ.ಇವತ್ತು ನಿಮ್ಮಲ್ಲಿ ಅನೇಕ ಮಂದಿ ನಿಮಗೆ ಸಾಧಕರಾಗಿ ನಿಮ್ಮ ಮುಂದೆ ಇರಬಹುದು.ಆದರೆ ಅವರೆಲ್ಲ ಹಲವು ವರ್ಷಗಳ ಶ್ರಮದಿಂದ ಸಾಧಕರಾಗಿದ್ದಾರೆ.ಹಾಗಾಗಿ ವಿದ್ಯಾರ್ಥಿಗಳೆಲ್ಲ ಒಮ್ಮೆ ಗುರಿ ಮುಟ್ಟುವ ತನಕ ಕಷ್ಟಪಟ್ಟು ಕೆಲಸ ಮಾಡಿ, ಮಾತೃ ಭಾಷೆಗೆ ಪ್ರಾಮುಖ್ಯತೆ ಕೊಡಿ ಎಂದರಲ್ಲದೆ,ಯಾವತ್ತೂ ಖುಷಿಯಾಗಿರಿ, ಗುರಿಗಾಗಿ ಕೆಲಸ ಮಾಡಿ ಎಂದರು.


ಸಾಧನೆಗೆ ತಾಳ್ಮೆ ಮುಖ್ಯ:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಮಾತನಾಡಿ ಸಾಧನೆಗೆ ತಾಳ್ಮೆ ಮುಖ್ಯ, ತಾಳ್ಮೆ ಇದ್ದಾಗ ಗುರಿ ಸಾಽಸಬಹುದು.ಕಷ್ಟಪಟ್ಟು ಓದಿ ಜೀವನದಲ್ಲಿ ಏನಾದರೂ ಸಾಧನೆ ಮಾಡಿ. ಪುಸ್ತಕಗಳನ್ನು ಪ್ರೀತಿಸಿ ಎಂದರು.


ಕನ್ನಡಕ್ಕೆ ನಿತ್ಯ ಸಹಕಾರವಿರಲಿ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಮಾತನಾಡಿ ಕನ್ನಡದ ಸೇವೆಗಾಗಿ ಸಾಹಿತ್ಯ ಪರಿಷತ್‌ನಿಂದ ಹಲವಾರು ಕಾರ್ಯಕ್ರಮ ನಿರಂತರ ನಡೆಯುತ್ತದೆ.ವಿದ್ಯಾರ್ಥಿಗಳು ಇದರಲ್ಲಿ ಸದಾ ಪಾಲ್ಗೊಳ್ಳಬೇಕು.ಕನ್ನಡಕ್ಕೆ ನಿತ್ಯ ಎಲ್ಲರ ಸಹಕಾರವಿರಲಿ ಎಂದರು.


ಪ್ರತಿ ತಿಂಗಳು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ:
ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಹಿಂದೆ ಸಾಹಿತಿಗಳು ತಾವು ಕ್ರೋಢೀಕರಿಸಿದ ಹಣದಲ್ಲಿ ಸಾಹಿತ್ಯ ಸಂಭ್ರಮ ಮಾಡುತ್ತಿದ್ದರು.ಆಗ ಪ್ರಯಾಣ ವೆಚ್ಚ, ಗೌರವ ಧನ ಇರಲಿಲ್ಲ.ಎಲ್ಲರೂ ನೆಲದ ಮೇಲೆ ಚಾಪೆ ಹಾಕಿ ಮೂರು ದಿನ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ ದಿನವೂ ಇದೆ.ಇದರ ಮಧ್ಯೆ ಇವತ್ತು ಕನ್ನಡ ಹೆಮ್ಮರವಾಗಿ ಬೆಳೆದಿದೆ. ಹಿಂದೆ ಯಾವುದೇ ಸರಕಾರದಿಂದ ಅನುದಾನವೂ ಸಿಗುತ್ತಿರಲಿಲ್ಲ.ನಡುವೆ ಒಂದಿಷ್ಟು ಅನುದಾನ ಬರುತ್ತಿತ್ತು.ಇತ್ತೀಚಿಗಿನ ದಿನ ಮತ್ತೆ ಯಾವುದೇ ಅನುದಾನ ಬರುತ್ತಿಲ್ಲ. ಆದರೂ ಕನ್ನಡ ಸಾಹಿತ್ಯಕ್ಕಾಗಿ ಪ್ರತಿ ತಿಂಗಳು ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯುತ್ತಿದೆ.ಇಲ್ಲಿನ ತನಕ ಸುಮಾರು ೭೮ಕ್ಕೂ ಅಽಕ ಕಾರ್ಯಕ್ರಮ ಮಾಡಿದ್ದೇವೆ. ಕನ್ನಡದಲ್ಲಿ ಶೇ.100 ಅಂಕ ಗಳಿಸಿದವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಕಳೆದ ವರ್ಷ ಹೆಚ್ಚು ಮಂದಿ ಇದ್ದರು. ಈ ವರ್ಷ ಆ ಸಂಖ್ಯೆ ಕಡಿಮೆ ಆಗಿದೆ ಎಂದರು. ವಿದ್ಯಾರ್ಥಿಗಳಿಗೆ ಕನ್ನಡದಲ್ಲೂ ಐಎಎಸ್ ಹಾಗೂ ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದೆಂಬ ವಿಚಾರದ ಕಾರ್ಯಗಾರವನ್ನು ಡಾ.ಮೈತ್ರಿ ಭಟ್ ಅವರು ನಡೆಸಿಕೊಟ್ಟರು.


ಸಾಧಕ ವಿದ್ಯಾರ್ಥಿಗಳಿಗೆ ‘ಕನ್ನಡ ಪ್ರತಿಭೆ ಪ್ರಶಸ್ತಿ’:
ಕನ್ನಡ ಎಮ್‌ಎಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ಸೌಜನ್ಯ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ ಶೇ.100 ಅಂಕ ಪಡೆದ 19 ಹುಡುಗರು, 87 ಹುಡುಗಿಯರು ಸೇರಿದಂತೆ ಒಟ್ಟು 105 ವಿದ್ಯಾರ್ಥಿಗಳಿಗೆ ಹಾಗೂ 10ನೇ ತರಗತಿಯಲ್ಲಿ 615ರ ಮೇಲ್ಪಟ್ಟು ಅಂಕ ಪಡೆದ 10 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಆಶಾ ಬೆಳ್ಳಾರೆ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.ನಿವೃತ್ತ ಮುಖ್ಯಗುರು ನಾರಾಯಣ ರೈ ಕುಕ್ಕುವಳ್ಳಿ, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯ, ಉಪನ್ಯಾಸಕರಾದ ಕಾರ್ತಿಕ್ ಕುಮಾರ್, ಮಧುರ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ, ಉಪನ್ಯಾಸಕಿ ನಾಗಶ್ರೀ ಅವರು ಅತಿಥಿಗಳಿಗೆ ಪುಸ್ತಕ ಹಾರವನ್ನು ಸಮರ್ಪಿಸಿದರು.ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನ್‌ಭೋಗ್ ಸ್ವಾಗತಿಸಿದರು.ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.ಅಗಮ್ಯ ಅವರು ದೇವರನ್ನು ಸ್ತುತಿಸಿದರು. ರೇಣುಕಾ ಮತ್ತು ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here