![](https://puttur.suddinews.com/wp-content/uploads/2024/06/%E0%B2%B8%E0%B2%A6%E0%B2%97%E0%B2%A6%E0%B2%B8-1.jpg)
ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024- 25 ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಸಭೆಯು ಜೂ.15ರಂದು ನಡೆಯಿತು.
ಸಭೆಯಲ್ಲಿ ಈ ವರ್ಷದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕಡಬ ತನು ಎಲೆಕ್ಟ್ರಾನಿಕ್ಸ್ ಮಾಲಕ ಮಂಜುನಾಥ್ ಕೋಲಂತಾಡಿ ಮತ್ತು ಉಪಾಧ್ಯಕ್ಷರಾಗಿ ಪುತ್ರಬೈಲು ಪ್ರಸನ್ನ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಶಾಲಾ ಸಂಚಾಲಕರಾದ ಫಾ|ಅನಿಶ್,ಮುಖ್ಯೋಪಾಧ್ಯಾಯಿನಿ ಸಿ|ಮರಿಯ ಲೂಯಿಸ, ಪೋಷಕರು ಮತ್ತು ಶಾಲಾ ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು.